More

    ಭಗೀರಥ ಉಪ್ಪಾರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷರ ಆಯ್ಕೆ

    • ತಿ.ನರಸೀಪುರ : ತಾಲೂಕು ಭಗೀರಥ ಉಪ್ಪಾರ ಜನ ಕಲ್ಯಾಣ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಕನ್ನಹಳ್ಳಿ ಮೋಳೆ ಸಿದ್ದಪ್ಪಸ್ವಾಮಿ ಆಯ್ಕೆಯಾದರು.
      ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರೆಯಲಾಗಿದ್ದ ತಾಲೂಕು ಉಪ್ಪಾರ ಜನಕಲ್ಯಾಣ ಟ್ರಸ್ಟ್ ನ ಸದಸ್ಯರ ಸಭೆಯಲ್ಲಿ ಸಿದ್ದಪ್ಪಸ್ವಾಮಿಯವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    • ಈ ಹಿಂದೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಾಪುರ ರಾಮಶೆಟ್ಟಿ ಅವರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿದ್ದಪ್ಪಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಪ್ಪಾರ ಮಹಾಸಭಾದ ಅಧ್ಯಕ್ಷ ಕಾವೇರಿ ಪುರ ಮಹದೇವಶೆಟ್ಟಿ ತಿಳಿಸಿದರು.

    • ಸಂಘದ ಪ್ರಧಾನ ಕಾರ್ಯದರ್ಶಿ ಶಾಂತರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಜನಾಂಗದ ಸಮಸ್ಯೆ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಮತ್ತಿತರೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸ್ಪಂದಿಸುವ ಸಂಬಂಧ ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿತ್ತು. ಹಾಗಾಗಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದರು.

    • ಗ್ರಾಪಂ ಸದಸ್ಯ ರಾಜೇಶ್, ತಾಪಂ ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಬನ್ನೂರು ಸಿದ್ದಶೆಟ್ಟಿ, ಕೆಂಪಯ್ಯನಹುಂಡಿ ಮಹೇಶ್, ಮಾವಿನಹಳ್ಳಿ ಮಾದೇಶ್, ರಮೇಶ್, ಕನ್ನಳ್ಳಿ ಮೋಳೆ ಕೆ.ಮಹದೇವಶೆಟ್ಟಿ, ಮೂಗೂರು ಮೋಳೆ ಬೆಳ್ಳಿ, ಹೊಸಳ್ಳಿ ಮೋಳೆ ಚಿನ್ನಸ್ವಾಮಿ, ಶಂಕರ, ಕರೋಹಟ್ಟಿ ಮಹೇಶ್, ತೊಟ್ಟವಾಡಿ ನಾಗಣ್ಣ,ಹಳೇ ಕೆಂಪಯ್ಯನಹುಂಡಿ ರಾಜಣ್ಣ, ಮಾದೇಶ್, ಪುಟ್ಟಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts