ಮೈಸೂರು: ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ದ ಮೆರವಣಿಗೆ ಅದ್ದೂರಿಯಾಗಿ ನಡೆದಿದ್ದು ವಿವಿಧ ಕಲಾ ತಂಡಗಳು ಉತ್ಸಾಹದಿಂದ ಭಾಗವಹಿಸಿವೆ. ಈ ಸಂದರ್ಭ ನಂದಿ ಕೋಲು ಪೂಜೆಯೂ ನಡೆದಿದ್ದು ಜನರ ಕಣ್ಮನ ಸೆಳೆದಿದೆ.ಈ ಸಂದರ್ಭ ವಿಆರ್ಎಲ್ ಟ್ರಾವೆಲ್ಸ್ನ ನಿರ್ದೇಶಕ ಶಿವ ಸಂಕೇಶ್ವರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಮೆರವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು.