ಬೆಂಗಳೂರು: ಕರೊನಾ ನಿಯಮ ಉಲ್ಲಂಘಿಸಿದ ಅರ್ಚಕರ ವಿರುದ್ಧ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಂಗಳವಾರ ಕೋವಿಡ್ ನಿಯಮ ಉಲ್ಲಂಘಿಸಿ, ವಿಜಯಪುರದ ಬೆಸ್ತರ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದ ಮುಂದೆ ಜನಜಾತ್ರೆ ಸೇರಿತ್ತು, ಕರೊನಾ ನಿಯಮಗಳನ್ನು ಗಾಳಿಗೆ ತೂರಿ ದೀಪಗಳ ಆರಾಧನೆಯಲ್ಲಿ ನೂರಾರು ಮಂದಿ ತೊಡಗಿದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್ನಲ್ಲಿ ವರದಿ ಪ್ರಸಾರವಾಗಿತ್ತು,
ದೇವಸ್ಥಾನದ ಬಾಗಿಲನ್ನು ತೆರೆಯದೆ, ದೇವಸ್ಥಾನದ ಮುಂಭಾಗದಲ್ಲಿರುವ ಗೇಟ್ ಹಾಗೂ ಕಲ್ಲಿಗೆ ಪೂಜೆಗಳನ್ನು ಮಾಡುತ್ತಿದ್ದ ಬಗ್ಗೆ ವರದಿ ಪ್ರಸಾರವಾಗಿತ್ತು, ಈ ಹಿನ್ನಲೆ ದೇವಸ್ಥಾನದ ಅರ್ಚಕರಾದ ಗಂಗಾಧರ ಎಂಬುವವರು ಸೇರಿದಂತೆ 20 ರಿಂದ 25 ಜನರ ಮೇಲೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಬೆಳ್ಳಂಬೆಳಗ್ಗೆ ಪೈಪ್ ಏರಿ ನಟಿಯ ಮನೆಗೆ ನುಗ್ಗಿದ 24ರ ಯುವಕ! ಸ್ವಲ್ಪದರಲ್ಲಿ ತಪ್ಪಿತು ಅನಾಹುತ
ಧಾರಾವಾಹಿಗಳು ಮುಂದುವರಿಯಲಿವೆ; ತಿಂಗಳಿಂದ ನಿಂತಿದ್ದ ಚಿತ್ರೀಕರಣ ಮತ್ತೆ ಶುರು