More

    ಒಂಟಿ ಮಹಿಳೆಯರನ್ನು ಗುರಿಯಾಗಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ವಿಕೃತಿ ಮೆರಿತಿದ್ದ ಗ್ಯಾಂಗ್ ಬಂಧನ​

    ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಂಬಿಕೆ ಹೆಸರಿನಲ್ಲಿ ಬಲೆಗೆ ಬೀಳಿಸಿ ವಿಕೃತ ಮೆರೆದು ಹಣ ದೋಚುತಿದ್ದ ಖತರ್ನಾಕ್​ ಗ್ಯಾಂಗ್​ ಒಂದನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಮಂಗಳ, ರವಿ, ಶಿವಕುಮಾರ್ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಮಂಗಳ ಮತ್ತು ರವಿ ಇಬ್ಬರು ಗಂಡ-ಹೆಂಡತಿ. ಈ ಗ್ಯಾಂಗ್​ ವಿಚ್ಛೇದಿತ ಅಥವಾ ವಿಧವೆರನ್ನೇ ಹುಡುಕುತ್ತಿತ್ತು. ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಂಗಳ, ಅವರಲ್ಲಿ ನಂಬಿಕೆ ಗಳಿಸಿಕೊಳ್ಳುತ್ತಿದ್ದಳು. ಬಳಿಕ ಫೋನ್ ಮಾಡಿ ಭೇಟಿ ಮಾಡಬೇಕು ಅಂತಾ ಮಂಗಳ ಕರೆಯುತ್ತಿದ್ದಳು.

    ಭೇಟಿ ಮಾಡಲು ಬಂದ ಮಹಿಳೆಯರನ್ನು ಕಾರು ಹತ್ತಿಸಿಕೊಂಡು ಅಪಹರಿಸುತ್ತಿದ್ದರು. ಬಳಿಕ ನಿರ್ಜನ ಪ್ರದೇಶದಕ್ಕೆ ಕರೆದುಕೊಂಡು ಹೋಗಿ, ಬಟ್ಟೆ ಬಿಚ್ಚುವಂತೆ ಮಹಿಳೆಗೆ ಹೇಳುತ್ತಿದ್ದರು. ಒಪ್ಪದೆ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತ್ತಿದ್ದರು. ನಂತರ ನಗ್ನ ವಿಡಿಯೋ ಮಾಡಿ, ಮೊಬೈಲ್​ನಲ್ಲಿ ಇಟ್ಟುಕೊಳ್ಳುತ್ತಿದ್ದರು. ನಂತರ ಆ ವಿಡಿಯೋ ಇಟ್ಟುಕೊಂಡು ಹೆದರಿಸಿ ಹಣ ಪೀಕುತ್ತಿದ್ದರು.

    ಇದೇ ರೀತಿ ಮಹಾಲಕ್ಷ್ಮಿ ಲೇಔನ್​ನ ಮಹಿಳೆ ಒಬ್ಬರಿಂದ ಒಂದು ಚಿನ್ನದ ಸರ, ಕಿವಿಯ ಓಲೆ ಹಾಗೂ ಉಂಗುರವನ್ನು ಖತರ್ನಾಕ್​ ಗ್ಯಾಂಗ್​ ಕಿತ್ತುಕೊಂಡಿದೆ. ಅಲ್ಲದೆ, ಹೆದರಿಸಿ, 84 ಸಾವಿರ ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಇದೇ ರೀತಿ ಕಿರುಕುಳ ನೀಡುವುದನ್ನು ಸಹಿಸಲಾರದೇ ಗ್ಯಾಂಗ್​ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದಳು. ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ತಾಯಿಯನ್ನು ಹೆಲಿಕಾಪ್ಟರ್​ ಮೂಲಕ ಮನೆಗೆ ಕರೆತಂದ ಮಗ!

    ಎರಡು ಬಾರಿ ಸಮನ್ಸ್​ ನೀಡಿದ್ರು ವಿಚಾರಣೆಗೆ ಗೈರು: ಸಂಸದ ಸಂಜಯ್​ ರಾವತ್​ ಮನೆ ಮೇಲೆ ಇಡಿ ದಾಳಿ

    ಜಾರ್ಖಂಡ್​ನ ಮೂವರು ಕಾಂಗ್ರೆಸ್​ ಶಾಸಕರಿದ್ದ ಕಾರಿನಲ್ಲಿ ರಾಶಿ ರಾಶಿ ಹಣ ವಶಕ್ಕೆ ಪಡೆದ ಬಂಗಾಳದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts