ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ ಕೊಲೆಯಾದ ದುರ್ದೈವಿ. ಆರೋಪಿಗಳಾದ ಪತ್ನಿ ಶ್ವೇತಾ ಮತ್ತು ಪ್ರಿಯಕರ ಸುರೇಶ್ ಅಲಿಯಾಸ್ ಮೂಲಿಸೂರಿ ಎಂಬಾತನನ್ನು ಬಂಧಿಸಲಾಗಿದೆ.
ತಾನು ವಾಸಿಸುತ್ತಿದ್ದ ಮೂರನೇ ಮಹಡಿಯ ಮನೆಯ ಟೆರೆಸ್ ಮೇಲೆ ತನ್ನ ಅಳಿಯ ಚಂದ್ರಶೇಖರ್ನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಯಲಹಂಕದ ಕೊಂಡಪ್ಪಲೇಔಟ್ ನಿವಾಸಿ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21ರಂದು ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕೃತ್ಯ ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾಳಿಂದಲೇ ನಡೆದಿದೆ ಎಂಬುದು ಖಚಿತವಾಗಿದೆ. ಶ್ವೇತಾ (21) ಮತ್ತು ಮತ್ತೊಬ್ಬ ಆರೋಪಿ ಸುರೇಶ್ (25) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಚಂದ್ರಶೇಖರ್ ಜೊತೆ ಶ್ವೇತಾಳ ಮದುವೆ ನಡೆಯುವುದಕ್ಕೂ ಮುಂಚಿನಿಂದಲೂ ಇಬ್ಬರ ನಡುವೆ ಪ್ರೀತಿಯಿತ್ತು. ಇಷ್ಟವಿಲ್ಲದಿದ್ದರೂ ತಾಯಿಯ ತಮ್ಮನ ಜೊತೆ ಶ್ವೇತಾ ಬಲವಂತವಾಗಿ ಮದುವೆ ಆಗಿದ್ದಳು. ಮದುವೆ ನಂತರವೂ ಶ್ವೇತಾ ಮತ್ತು ಸುರೇಶ್ ನಡುವೆ ಪ್ರೀತಿ ಮುಂದುವರಿದು, ವಿವಾಹೇತರ ಸಂಬಂಧವನ್ನು ಹೊಂದಿದ್ದರು.
ಇಬ್ಬರ ಸಂಬಂಧಕ್ಕೆ ಗಂಡ ಅಡ್ಡಿಯಾಗಿದ್ದರಿಂದ ಆತನನ್ನು ಸಾಯಿಸಲು ಪ್ರಿಯಕರನ ಜೊತೆ ಸೇರಿ, ಶ್ವೇತಾ ಸಂಚು ರೂಪಿಸಿದ್ದಳು. ಬಳಿಕ ತಮ್ಮ ಪ್ಲಾನ್ನಂತೆ ಕೊಲೆ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಶ್ವೇತಾ ಮತ್ತು ಸುರೇಶ್ ನಾಟಕವಾಡಿದ್ದರು. ಇದೀಗ ಇಬ್ಬರ ಮುಖವಾಡ ಕಳಚಿಬಿದ್ದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.
ನವಾಜ್ ಎಸೆದ ವೈಡ್ ಬಾಲ್ ಸ್ಪಿನ್ ಆಗಿ ಪ್ಯಾಡ್ಗೆ ಬಡಿದಿದ್ರೆ ಏನ್ ಮಾಡ್ತಿದ್ರಿ? ಅಚ್ಚರಿಯ ಉತ್ತರ ಕೊಟ್ಟ ಅಶ್ವಿನ್
ಪರಸ್ತ್ರಿಗಾಗಿ ಪತ್ನಿಯ ಮೇಲೆಯೇ ಕಾರು ಹರಿಸಿದ ಬಾಲಿವುಡ್ ನಿರ್ಮಾಪಕನ ವಿರುದ್ಧ ದೂರು ದಾಖಲು
ತೆಲಂಗಾಣದ TRS ಸರ್ಕಾರ ಉರುಳಿಸುವ ಯತ್ನ: ಶಾಸಕರಿಗೆ 100 ಕೋಟಿ ರೂ. ಆಫರ್, ಸಿಕ್ಕಿಬಿದ್ದ ನಾಲ್ವರು