ಬೆಂಗಳೂರು: ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಭಾರಿ ಗಾತ್ರದ ಮರವೊಂದು ಧರೆಗುರುಳುವ ಮೂಲಕ ನಗರದ ಗಿರಿನಗರದ ಜನತೆಗೆ ಶಾಕ್ ಕೊಟ್ಟಿದೆ.
ಗಾಳಿ ಮಳೆಯಿಲ್ಲದಿದ್ದರೂ ಮರ ಬಿದ್ದಿದೆ. ಮೋರಿಯಲ್ಲಿ ಬೇರು ಬಿಟ್ಟಿದ್ದ ಮರ ಬುಡ ಹಾಗೂ ಕಲ್ಲು ಚಪ್ಪಡಿಗಳ ಸಮೇತ ರಸ್ತೆಗೆ ಉರುಳಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಧರೆಗುರುಳಿದ ಮರ ಎರಡು ಕಾರುಗಳ ಮೇಲೆ ಬಿದಿದ್ದು, ಕಾರುಗಳು ಸಂಪೂರ್ಣ ಜಖಂಗೊಂಡಿವೆ. ರಸ್ತೆಗೆ ಅಡ್ಡಾಲಾಗಿ ಮರಬಿದ್ದಿದ್ದು, ಅದರ ತೆರವು ಕಾರ್ಯ ನಡೆಯಬೇಕಿದೆ.
ಇಂದು ಅಕ್ಷಯ ತೃತೀಯ; ಅಕ್ಷಯ ತದಿಗೆಗೆ ಮಹತ್ವ ಬಂದಿದ್ದು ಹೇಗೆ? ಈ ಕತೆ ಓದಿ…