More

    Rock Salt Benefits: ಕಲ್ಲುಪ್ಪು ಸೇವನೆ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳು ನೀಡಲಿದೆ

    ಉಪ್ಪಿಗಿಂತ ರುಚಿ ಇಲ್ಲ ಎಂಬುದು ಜಗತ್ತಿನ ಸಾರ್ವಕಾಲಿಕ ಸತ್ಯ. ಉಪ್ಪು ಇಲ್ಲದೆ ಯಾವುದೇ ಆಹಾರವನ್ನು ತಿನ್ನುವುದು ತುಂಬಾ ಕಷ್ಟ. ಹೀಗಾಗಿಯೇ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಹೋದರೆ ಊಟದ ಎಲೆಯಲ್ಲಿ ಮೊದಲು ಬಡಿಸುವ ಪದಾರ್ಥವೇ ಉಪ್ಪು. ಹೋಟೆಲ್​ಗಳಲ್ಲೂ ಒಂದು ಡಬ್ಬಿಯಲ್ಲಿ ಉಪ್ಪನ್ನು ಇಟ್ಟಿರುತ್ತಾರೆ. ಉಪ್ಪು ಖಡಾಖಂಡಿತವಾಗಿ ಬೇಕೆ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಉಪ್ಪನ್ನು ಅತಿಯಾಗಿ ಸೇವನೆ ಮಾಡುತ್ತಿದ್ದಾರೆ. ಆದರೆ, ಇದು ತುಂಬಾ ಅಪಾಯಕಾರಿ. ಅದರಲ್ಲೂ ಬಿಳಿ ಉಪ್ಪಿನಲ್ಲಿರುವ ಕೆಲವು ಲವಣಗಳು ದೇಹದ ವಿವಿಧ ಅಂಗಗಳ ಮೇಲೆ ದಾಳಿ ಮಾಡುತ್ತದೆ ಮತ್ತು ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಆದರೆ ಬಿಳಿ ಉಪ್ಪಿನ ಬದಲು ಕಲ್ಲು ಉಪ್ಪನ್ನು ಬಳಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಕಲ್ಲು ಉಪ್ಪಿನಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳನ್ನು ಇಂದು ನಾವು ಕಂಡುಕೊಳ್ಳಬಹುದು.

    ಇದನ್ನೂ ಓದಿ: ಮಂಗಳೂರು ಮೀನುಗಾರರ ಬಲೆಗೆ ಬಿದ್ದ 300 ಕೆಜಿ ತೂಕದ ಮುರು! ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ

    ಜೀರ್ಣಕ್ರಿಯೆ ಸುಧಾರಿಸುತ್ತದೆ: ಕಲ್ಲು ಉಪ್ಪಿನ ರಾಸಾಯನಿಕ ಹೆಸರು ಸೋಡಿಯಂ ಕ್ಲೋರೈಡ್. ಈ ಉಪ್ಪನ್ನು ದಕ್ಷಿಣ ಭಾರತೀಯರು ಹೆಚ್ಚಾಗಿ ಸೇವಿಸುತ್ತಾರೆ. ಹೊಟ್ಟೆನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಈ ಉಪ್ಪನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದರ ಜತೆಗೆ ಜೀರ್ಣಾಂಗ ವ್ಯವಸ್ಥೆಯೂ ಸದೃಢವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಗಾಗ ಹೊಟ್ಟೆನೋವು, ಎದೆಯುರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಈ ನೀರನ್ನು ಕುಡಿಯಬೇಕು.

    ವಸಡಿನ ಆರೋಗ್ಯ: ಕಲ್ಲು ಉಪ್ಪನ್ನು ಹಲ್ಲಿನ ಪುಡಿಯಾಗಿಯೂ ಬಳಸಬಹುದು. ಇದನ್ನು ಬಳಸುವುದರಿಂದ ವಸಡುಗಳು ಬಲಗೊಳ್ಳುವುದಲ್ಲದೆ, ಹಲ್ಲಿನ ಮೇಲೆ ಸಂಗ್ರಹವಾಗಿರುವ ಎಲ್ಲ ತ್ಯಾಜ್ಯ ವಸ್ತುಗಳನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಇದಲ್ಲದೇ ವಸಡು ನೋವು, ಊತ ಸಮಸ್ಯೆಗಳೂ ದೂರವಾಗುತ್ತವೆ ಎನ್ನುತ್ತಾರೆ ಆಯುರ್ವೇದ ತಜ್ಞರು.

    ಕೀಲು ನೋವು ನಿವಾರಣೆ: ಇತ್ತೀಚಿನ ದಿನಗಳಲ್ಲಿ ಕೀಲು ನೋವಿನಿಂದ ಬಳಲುತ್ತಿರುವ ಅನೇಕ ಜನರಿಗೆ ಸಹಾಯ ಮಾಡಲು ಕಲ್ಲು ಉಪ್ಪು ಪರಿಣಾಮಕಾರಿಯಾಗಿದೆ. ಆದರೆ ಕೀಲು ನೋವಿನಿಂದ ಬಳಲುತ್ತಿರುವವರು ಪ್ರತಿದಿನ ಕಲ್ಲು ಉಪ್ಪಿನ ಬ್ಯಾಂಡೇಜ್ ಅನ್ನು ನೋವು ಪೀಡಿತ ಪ್ರದೇಶದಲ್ಲಿ ಇಡುವುದರಿಂದ ಉತ್ತಮ ಪರಿಹಾರವನ್ನು ಪಡೆಯುತ್ತಾರೆ. ಇದರ ಗುಣಲಕ್ಷಣಗಳು ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಹಾಗಾಗಿ ಪದೇ ಪದೇ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರೂ ಇದನ್ನು ಬಳಸಬಹುದು. (ಏಜೆನ್ಸೀಸ್​)

    ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ ಭಾರತ ಬ್ಯಾಡ್ಮಿಂಟನ್ ತಂಡ: ಸಿಂಧು ಪಡೆಗೆ ನಿರಾಸೆ

    ಸಂಪಾದಕೀಯ| ಬಾಧಿತರಿಗೆ ನೆರವು ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts