ಬಳ್ಳಾರಿ: ಕಾಲುವೆಯಲ್ಲಿ ನೀರು ಕುಡಿಯಲು ಹೋದ ಯುವಕರಿಬ್ಬರು ಮೃತಪಟ್ಟಿರುವ ಘಟನೆ ಹೊಸಪೇಟೆಯಲ್ಲಿ ಭಾನುವಾರ ನಡೆದಿದೆ.
ಸಂಡೂರು ಮೂಲದ ಕಿರಣ್ (23) ಮತ್ತು ಅಬ್ದುಲ್ಲಾ (23) ಮೃತ ದುರ್ದೈವಿಗಳು. ಹೊಸಪೇಟೆಗೆ ಆಗಮಿಸಿದ್ದ ಯುವಕರು ಸಂಡೂರಿಗೆ ಹಿಂತಿರುಗುವಾಗ ಮಾರ್ಗ ಮಧ್ಯೆದಲ್ಲಿ ಬಾಯಾರಿಕೆಯಿಂದ ಎಚ್.ಎಲ್.ಸಿ ಕಾಲುವೆಯಲ್ಲಿ ನೀರು ಕುಡಿಯಲು ಹೋಗಿದ್ದರು.
ಇದನ್ನೂ ಓದಿ: ಪೆಡ್ಲರ್ಗಳಿಗೆ ಶುರುವಾಯ್ತು ಇಡಿ ಭೀತಿ : ಅಕ್ರಮ ಆಸ್ತಿ ಮರೆ ಮಾಚಲು ಯತ್ನ
ಅಬ್ದುಲ್ಲಾ ಬಾಟಲಿಯಲ್ಲಿ ನೀರುವ ತುಂಬುವಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಬಳಿಕ ಆತನನ್ನ ಕಾಪಾಡಲು ಹೋದ ಕಿರಣ್ ಕೂಡಾ ಕಾಲುವೆಗೆ ಬಿದ್ದು, ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
Web Exclusive | ಕರೊನಾ ನಿರ್ವಹಣೆಗೆ ಸಿಬ್ಬಂದಿ ಇಲ್ಲದೆ ಪರದಾಡುತ್ತಿದೆ ಆರೋಗ್ಯ ಇಲಾಖೆ!