ಬೆಳಗಾವಿ:ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಹರಿತವಾದ ಆಯುಧ (ತಲವಾರ)ದಿಂದ ಮಹಿಳೆಯನ್ನು ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಕೊಲೆಯಾಗಿರುವ ಮಹಿಳೆ ಬೈಲಹೊಂಗಲ ತಾಲೂಕು ಮೂಗ ಬಸವ ಗ್ರಾಮದ ಸುಧಾರಾಣಿ ಎಂದು ಗುರುತಿಸಲಾಗಿದೆ. ಈರಣ್ಣ ಬಾಬು ಜಗಜಂಪಿ ಕೊಲೆ ಮಾಡಿದ ಆರೋಪಿ. ಬುಧವಾರ ಬೆಳಿಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಬಳಿ ಇಂದು ಬೆಳಗ್ಗೆ ಈ ಕೊಲೆ ನಡೆದಿದೆ. ಸುಧಾರಾಣಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ಮಾಡುತ್ತಿದ್ದಳು.
ಇದನ್ನೂ ಓದಿ: ಕರೊನಾ ದಾಖಲೆಯ ಇಳಿಕೆ; ದೇಶದಲ್ಲಿ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ವೈರಸ್
ಇದು ಪ್ರೀತಿ ಹಾಗೂ ಹಣಕಾಸಿನ ವ್ಯವಹಾರವಾಗಿ ಕೊಲೆ ನಡೆದಿದೆ ಎಂದು ಗೊತ್ತಾಗಿದೆ. ಆರೋಪಿ ಬಿಸಿದ ತಲವಾರದ ಹೊಡೆತಕ್ಕೆ ಮೃತ ಮಹಿಳೆಯ ಮುಖ ಸೇರಿ ಶರೀರದ ಕೆಲವು ಭಾಗ ಛಿದ್ರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗೋಹತ್ಯೆ ನಿಷೇಧ ಕಠಿಣ ಜಾರಿಗೆ ಸರ್ಕಾರ ಸಿದ್ಧ | 6 ತಿಂಗಳ ನಂತರ ಗೋಶಾಲೆಗಳಿಗೆ ಗಂಡುಕರುಗಳ ಸ್ವೀಕಾರ