More

    ಬೆಳಗಾವಿ: ವೇಶ್ಯಾವಾಟಿಕೆ ಸಂತ್ರಸ್ತೆಯರನ್ನು ಪಾಲಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಪೊಲೀಸರು!

    ಬೆಳಗಾವಿ: ಹೈಟೆಕ್ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ರಕ್ಷಣೆಗೆ ಒಳಗಾಗಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

    ಕಳೆದ ಫೆಬ್ರವರಿ 7 ರಂದು ಬೆಳಗಾವಿಯ ಸದಾಶಿವ ನಗರದಲ್ಲಿ ಹೈಟೆಕ್ ವೇಶಾವಾಟಿಕೆ ಮೇಲೆ ಬೆಳಗಾವಿ ಎಪಿಎಂಸಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಿ, ಕೆಲವರನ್ನು ಬಂಧಿಸಲಾಗಿತ್ತು.

    ಯುವತಿಯರ ಬಗ್ಗೆ ವಿಚಾರಿಸಿದಾಗ ಓರ್ವ ಯುವತಿ ಉತ್ತರ ಪ್ರದೇಶ ಮೂಲದವಳೆಂದು ತಿಳಿದುಬಂದಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಯುವತಿ ಕಾಣೆಯಾಗಿದ್ದಳು. ಗಾಜಿಯಾಬಾದ್​ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

    ಇದನ್ನೂ ಓದಿರಿ: ಪತ್ನಿಯ ಮೊಬೈಲ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ಅಸಹ್ಯ ಹುಟ್ಟಿದೆ- ಅವಳಿಗೆ ವಿಚ್ಛೇದನ ನೀಡಬಹುದೆ?

    ಓರ್ವ ಯುವಕನನ್ನು ಪ್ರೀತಿಸಿ, ಆತನಿಂದ ಮೋಸ ಹೋಗಿದ್ದ ಯುವತಿ, ವಾಪಸ್​ ಮನೆಗೂ ಹೋಗದೇ, ದಿಕ್ಕು ತೋಚದೇ ಇಲ್ಲಿಯವರೆಗೂ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದಳು.

    ಫೆ.7ರಂದು ನಡೆದ ದಾಳಿಯಲ್ಲಿ ಯುವತಿಯರನ್ನು ರಕ್ಷಣೆ ಮಾಡಿದ ಎಪಿಎಂಸಿ ಪೊಲೀಸರು ಕುಟುಂಬದ ಸದಸ್ಯರ ವಿಳಾಸ ಪತ್ತೆಹಚ್ಚಿ ಯುವತಿಯರನ್ನು ಸ್ವಂತ ಊರಿಗೆ ಕಳುಹಿಸಿ ಮಾನವೀಯತೆಯ ಮೆರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಭೀಕರ ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ ಸ್ಥಿತಿ ಗಂಭೀರ..!

    ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ…; ಭಾಗ-1

    ಕೇರಳವೀಗ ಕೇಸರಿಮಯ; ಎಡ ಪಂಥ ತೊರೆದು ಬಿಜೆಪಿ ಸೇರಿದ 98 ಕಾರ್ಯಕರ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts