ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭಗೊಂಡು ಇದೀಗ ಐದನೇ ವಾರದತ್ತ ಸಾಗುತ್ತಿದೆ. ಈ ನಡುವೆ ಮನೆಯ ಸದಸ್ಯರ ಮಧ್ಯೆಯಿರುವ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತಿದ್ದರೂ, ತಮ್ಮ ಪ್ರತಿಸ್ಪರ್ಧಿಗಳೊಡನೆ ನಗುನಗುತ್ತಲೇ ಮುಂದೆ ಸಾಗುತ್ತಿದ್ದಾರೆ. ವಿನಯ್-ಕಾರ್ತಿಕ್, ಸಂಗೀತಾ ತೀವ್ರ ಮಾತಿನ ಜಟಾಪಟಿಯಲ್ಲಿ ಭಾಗಿಯಾಗಿದ್ದು, ಏಕವಚನದ ಚೌಕಟ್ಟನ್ನು ಮೀರಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ರೋಹಿತ್ ಶರ್ಮ DRS ಮನವಿ ಮಾಡುವುದಿಲ್ಲ! ಅದಕ್ಕೆ ಕಾರಣ ಈ ವ್ಯಕ್ತಿಗಳು…
ಈ ವಾರಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಳ್ಳಿ ಟಾಸ್ಕ್ವೊಂದನ್ನು ಮನರಂಜನಾ ದೃಷ್ಟಿಯಿಂದ ನೀಡಿದ್ದರು. ಇದರಲ್ಲಿ ಮೊದ ಮೊದಲು ಉತ್ಸಾಹದಿಂದ ಭಾಗಿಯಾದ ಸದಸ್ಯರು ತದನಂತರ ಪದಬಳಕೆ ಮೂಲಕ ತಮ್ಮ ವ್ಯಕ್ತಿತ್ವದ ಪ್ರಶ್ನೆಯನ್ನು ತಾವೇ ಕೆದಕಿಕೊಂಡರು. ಸದ್ಯ ಟಾಸ್ಕ್ನಲ್ಲಿ ವಿನಯ್ ನೇತೃತ್ವದ ತಂಡ ಜಯಶಾಲಿಯಾಗಿ, ಮನೆಯ ಲಕ್ಸುರಿ ಬಜೆಟ್ಗೆ ಅರ್ಹರಾಗಿದೆ.
ಈ ಬೆನ್ನಲ್ಲೇ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದ್ದು, ತುಕಾಲಿ ಸಂತೋಷ್ ಮತ್ತು ವಿನಯ್ ಇಬ್ಬರು ನಾಯಕನ ಸ್ಥಾನಕ್ಕೆ ಪೈಪೋಟಿ ನೀಡಿದರು. ಅಂತಿಮವಾಗಿ ಗೆಲುವಿನ ಮುಖೇನ ಮನೆಯ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಆನೆ ಬಂತೊಂದು ಆನೆ ಎಂದು ಘರ್ಜಿಸಿದ ವಿನಯ್ ನೋಡಿದ ಸಂಗೀತಾ, ‘ಇದು ನಮ್ಮ ವಸ್ಟ್ ವೀಕ್ ಆಗಲಿದೆ. ನಾವು ಆನೆ ವಿರೋಧಿಗಳಲ್ಲ. ಆನೆ ಕಂಡರೆ ಹೆದರುವುದಿಲ್ಲ’ ಎಂದು ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಏನೇನೋ ಮಾತಾಡ್ತಾರೆ…ಲಿಂಕ್ ಮಿಸ್ ಆಗಿರಬೇಕು ಎಂದ ಡಿಕೆಶಿ
ಈ ಮಾತುಗಳು ಈ ವಾರಾಂತ್ಯದಲ್ಲೇ ಅಂತ್ಯವಾಗಲಿದೆಯಾ ಅಥವಾ ಮುಂದಿನ ಟಾಸ್ಕ್ನಲ್ಲಿ ಮುಂದುವರೆಯಲಿದ್ಯಾ? ಎಂಬುದು ಶನಿವಾರ ನಡೆಯಲಿರುವ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಸುದೀಪ್ ಅವರ ಖಡಕ್ ಸಲಹೆಗಳಿಂದ ತಿಳಿಯಲಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
ಕೆಇಎ ಪರೀಕ್ಷೆ ಅಕ್ರಮ; ಏಳು ಜನ ಪೊಲೀಸ್ ಕಸ್ಟಡಿಗೆ, ಈ ಮಾಹಿತಿ ಕಲೆಹಾಕಲು ಮುಂದಾದ ಪೊಲೀಸರು