ಬೆಂಗಳೂರು: ಫೋಟೊದಲ್ಲಿ ಅಮಾಯಕಿಯ ಹಾಗೆ ಪೋಸ್ ನೀಡುತ್ತಿರುವ ಈಕೆ, ತಾನು ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದಲೇ ಕೋಟಿ ಕೋಟಿ ಹಣ ಕದ್ದಿದ್ದಾಳೆ. ಸಜಿಲಾ ಗುರುಮೂರ್ತಿ ಎನ್ನುವಾಕೆ ಬಂಧಿತ ಆರೋಪಿ.
ಈಕೆ ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್ನ ಮ್ಯಾನೇಜರ್ ಆಗಿದ್ದಳು. ತನ್ನ ಹುದ್ದೆಯ ಲಾಭವನ್ನು ಬಳಸಿಕೊಂಡು ಈಕೆ, ಗ್ರಾಹಕರ ಅನುಮತಿ ಇಲ್ಲದೆ 4.92 ಕೋಟಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಈಗ ಆಕೆಯನ್ನು ಬಂಧಿಸಲಾಗಿದೆ.
ಆರೋಪಿತೆ ಗ್ರಾಹಕರ ಅನುಮತಿ ಇಲ್ಲದೆ, ಅವರ ಖಾತೆಯಿಂದ ಹಣ ತೆಗೆದು ವಿಮಾ ಬಾಂಡ್ಗಳಮೇಲೆ ಹೂಡಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿತೆಯನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿತೆ ಮೇಲೆ ಉಪ್ಪಾರಪೇಟೆ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು ಗಾಂಧಿನಗರದ ಐಡಿಬಿಐ ಬ್ರಾಂಚ್ನಲ್ಲೂ ಕೋಟಿ ಕೋಟಿ ದೋಖಾ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬರುತ್ತಿದೆ.
ಈ ಹಿನ್ನೆಲೆ ಉಪ್ಪಾರಪೇಟೆ ಪೊಲೀಸರು ಆರೋಪಿತೆಯನ್ನ ವಶಕ್ಕೆ ಪಡೆದಿದ್ದು ಸದ್ಯ ಆರೋಪಿತೆಯಿಂದ 23 ಲಕ್ಷ ಮೌಲ್ಯದ ವಿಮಾ ಬಾಂಡ್ ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಪೊಲೀಸರು ಈಕೆ ಎಲ್ಲೆಲ್ಲಿ ವಂಚನೆ ಮಾಡಿದ್ದಾಳೆ ಎನ್ನುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.