More

    ‘ಬಾಂದ್ರಾ’ ಋಣಾತ್ಮಕ ವಿಮರ್ಶೆ; 7 ಯೂಟ್ಯೂಬರ್‌ಗಳ ವಿರುದ್ಧ ಕೇಸ್ ದಾಖಲಿಸಲು ಮುಂದಾದ ನಿರ್ಮಾಪಕ

    ತಿರುವನಂತಪುರಂ: ದಿಲೀಪ್ ಮತ್ತು ತಮನ್ನಾ ಭಾಟಿಯಾ ಅಭಿನಯದ ಅರುಣ್ ಗೋಪಿ ನಿರ್ದೇಶನದ ‘ಬಂದ್ರಾ’ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕರು ಏಳು ಯೂಟ್ಯೂಬರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಜಿತ್ ವಿನಾಯಕ್ ಫಿಲಂಸ್ ಈ ಸಂಬಂಧ ಇಲ್ಲಿನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದೆ.

    ಇದನ್ನೂ ಓದಿ: ಐಶ್ವರ್ಯ ರೈ ಬಗ್ಗೆ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚಿಸಿದ ಪಾಕ್ ಮಾಜಿ ಕ್ರಿಕೆಟಿಗ
    ಚಿತ್ರದ ವಿರುದ್ಧ ಕೆಟ್ಟ ವಿಮರ್ಶೆ ನೀಡಿದ್ದಕ್ಕೆ ಅಶ್ವಂತ್ ಕೋಕ್, ಶಿಹಾಬ್, ಉನ್ನಿ ವ್ಲಾಗ್ಸ್, ಶಾಝ್ ಮುಹಮ್ಮದ್, ಅರ್ಜುನ್, ಶಿಜಾಜ್ ಟಾಕ್ಸ್ ಮತ್ತು ಸಾಯಿ ಕೃಷ್ಣ ಎಂಬ ಏಳು ಮಂದಿ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಪೊಲೀಸರಿಗೆ ಇದರ ಬಗ್ಗೆ ಸೂಚನೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಚಿತ್ರ ಬಿಡುಗಡೆಯಾದ ಬಳಿಕ ಕಂಪನಿಗೆ ನಷ್ಟವಾಗುವ ರೀತಿಯಲ್ಲಿ ನೆಗೆಟಿವ್ ಕ್ಯಾಂಪೇನ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರೇಕ್ಷಕರನ್ನು ದಾರಿತಪ್ಪಿಸಲು ಚಿತ್ರದ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

    ವಿಮರ್ಶೆ ಮಾಡುವಾಗ ಉದ್ದೇಶಪೂರ್ವಕ ಟೀಕೆ ಆಡಿ ಕೋಟಿ ಕೋಟಿ ನಷ್ಟವಾಗುವಂತೆ ಮಾಡಿದ್ದಾರೆ ಎನ್ನುತ್ತಾರೆ ಚಿತ್ರ ನಿರ್ಮಾಪಕರು. ಚಿತ್ರದ ಬಗ್ಗೆ ಪ್ರತಿಕ್ರಿಯಿಸಲು ಎಲ್ಲರಿಗೂ ಹಕ್ಕಿದೆ, ಆದರೆ ಉದ್ದೇಶಪೂರ್ವಕ ಮತ್ತು ಸುಲಿಗೆ ಮಾಡಲು ಮುಂದಾಗಿದ್ದರೆ ದೂರು ನೀಡಬಹುದು ಎಂದು ಪೊಲೀಸರು ಹೇಳುತ್ತಾರೆ.

    ನಾಯಿ ದಾಳಿ ಪ್ರಕರಣ​; ವಿಚಾರಣೆಗೆ ಹಾಜರಾದ ನಟ ದರ್ಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts