More

    ನಾಯಿ ದಾಳಿ ಪ್ರಕರಣ​; ವಿಚಾರಣೆಗೆ ಹಾಜರಾದ ನಟ ದರ್ಶನ್​

    ಬೆಂಗಳೂರು: ಮಹಿಳೆಯೊಬ್ಬರ ಮೇಲೆ ನಟ ದರ್ಶನ್​ ಅವರ ಮನೆಯ ನಾಯಿ ಮೇಲೆ ದಾಳಿ ಮಾಡಿತ್ತು. ಈ ಕುರಿತಾಗಿ ಸಂತ್ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯ ಕುರಿತಾಗಿ ನಟ ದರ್ಶನ್​ ಪೊಲೀಸ್​​ ಠಾಣೆಗೆ ಬಂದಿದ್ದಾರೆ.

    ನಡೆದಿದ್ದೇನು?: ಕೆಲ ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್​ ದರ್ಶನ್ ಮನೆಯ ನಾಯಿ ಅಮಿತಾ ಜಿಂದಾಲ್​ ಎಂಬ ಮಹಿಳೆ ಮೇಲೆ ದಾಳಿ ಮಾಡಿತ್ತು.ನಟ ದರ್ಶನ್​ ಮನೆಯ ನಾಯಿ ಕಚ್ಚಿದ ಬಳಿಕ ಐಪಿಸಿ ಸೆಕ್ಷನ್​ 289ರ ಅಡಿಯಲ್ಲಿ ಕೇಸ್​ ದಾಖಲಾಗಿತ್ತು.  ಇದಕ್ಕೆ ಸಂಬಂಧಿಸಿದಂತೆ ದರ್ಶನ್​ಗೆ ಪೊಲೀಸರು ನೋಟಿಸ್​ ನೀಡಿದ್ದರು.

    ಈ ಪ್ರಕರಣದಲ್ಲಿ ಎ2 ಆಗಿರುವ ಅವರು ಇಂದು (ನವೆಂಬರ್​ 15) ಪೊಲೀಸ್​ ಠಾಣೆಗೆ ಬಂದು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ದರ್ಶನ್​ ಅವರು ಆರ್​ಆರ್​ ನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ.  ಹದಿನೈದು ನಿಮಿಷದಲ್ಲಿ ವಿಚಾರಣೆ ಮುಗಿಸಿ ಹೊರಟಿದ್ದಾರೆ. ಹೇಳಿಕೆ ಪ್ರತಿಗೆ ಸಹಿ ಹಾಕಿಸಿಕೊಂಡ ಇನ್ಸ್​ಪೆಕ್ಟರ್ ವಿಚಾರಣೆ ಮುಗಿಸಿದ್ರು. ಬಳಿಕ ಜೀಪ್​​ನಲ್ಲಿ ದರ್ಶನ್ ತೆರಳಿದ್ದಾರೆ.

    ಮೂಲಗಳ ಪ್ರಕಾರ, ವಿಚಾರಣೆ ಬಳಿಕ ಮಾಧ್ಯಮದ ಮುಂದೆ ಮಾತಾಡಿದ ನಟ ದರ್ಶನ್​, ನಮ್ಮ ಹುಡುಗರಿಂದ ತಪ್ಪಾಗಿದೆ. ನಾನು ಮೊದಲೇ ಅವರಿಗೆ ಹೇಳಿದ್ದೇನೆ. ಮನೆ ಬಳಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಅಂತ. ಆದ್ರೆ ಘಟನೆ ನಡೆದ ದಿನ ನಾನು ಗುಜರಾತ್ ನಲ್ಲಿ ಶೂಟಿಂಗ್ ನಲ್ಲಿದ್ದೆ.  ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದೇನೆ. ಇನ್ನು ನಮ್ಮಿಂದ ಈ ರೀತಿ ಆಗಲ್ಲ. ನಮ್ಮ ಸಿಬ್ಬಂದಿಗೂ ಹೇಳಿದ್ದೇನೆ ಎಂದು ಇನ್ಸ್ ಪೆಕ್ಟರ್ ಮುಂದೆ ನಟ ದರ್ಶನ್ ಹೇಳಿದ್ದಾರಂತೆ ಎನ್ನಲಾಗಿದೆ.

    ಈ ಹಿಂದೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರ ಹೊಣೆಯನ್ನು ಯಾರೆಲ್ಲಾ ಹೊತ್ತೊಂಡಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts