More

    ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು … ಪಶ್ಚಾತ್ತಾಪ ಪಟ್ಟ ನಟ

    ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಅದೆಷ್ಟೋ ಜನ ಕಾಯುತ್ತಾರೆ. ಹಾಗಿರುವಾಗ, ಮಹೇಶ್ ಬಾಬು ಚಿತ್ರದಲ್ಲಿ ನಟಿಸಿ, ಈಗ ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ಪಶ್ಚಾತ್ತಾಪ ಪಡುವವರನ್ನು ಎಲ್ಲಾದರೂ ಕಂಡಿದ್ದೀರಾ? ಹಾಗೆ ಪಶ್ಚಾತ್ತಾಪ ಪಟ್ಟಿರುವ ನಟನೇ ಬಾಂಡ್ಲಾ ಗಣೇಶ್.

    ಬಾಂಡ್ಲಾ ಗಣೇಶ್, ತೆಲುಗು ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ನಂತರ ಬ್ರೇಕ್ ತೆಗೆದುಕೊಂಡು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿದ ಅವರು, ಬಹಳ ದಿನಗಳ ನಂತರ ಮಹೇಶ್ ಬಾಬು ಅಭಿನಯದ `ಸರಿಲೇರು ನೀಕ್ಕೆವ್ವರು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

    ಇದನ್ನೂ ಓದಿ: ನೃತ್ಯಗಾರರ ಸಮಸ್ಯೆಗೆ ಮಿಡಿದ ವರುಣ್ ಮನ

    ಈಗ ಆ ಚಿತ್ರದಲ್ಲಿ ನಟಿಸಬಾರದಾಗಿತ್ತು ಎಂದು ಗಣೇಶ್ ತಮ್ಮ ಆಪ್ತರ ಜತೆಗೆ ಹೇಳಿಕೊಂಡಿದ್ದಾರಂತೆ. ಆ ಚಿತ್ರದಲ್ಲಿ ನಟಿಸಿ, ತಪ್ಪು ಮಾಡಿದೆ ಎಂದು ಕೆಲವರ ಹತ್ತಿರ ಪಶ್ಚಾತ್ತಾಪ ಪಟ್ಟಿದ್ದಾರಂತೆ. ಇಷ್ಟಕ್ಕೂ ಗಣೇಶ್ ಬೇಸರಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು? ಈ ಚಿತ್ರದಲ್ಲಿ ಗಣೇಶ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರ ತಮಗೆ ದೊಡ್ಡ ಬ್ರೇಕ್ ಕೊಡಬಹುದು ಎಂದು ಅವರು ಭಾವಿಸಿದ್ದರು. ಆದರೆ, ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಡುವುದಕ್ಕಿಂತ, ನೆಗೆಟಿವ್ ವಿಮರ್ಶೆಗಳೇ ಹೆಚ್ಚಾಗಿ ಕೇಳಿ ಬಂದಿದ್ದು, ಹಾಗಾಗಿ ಗಣೇಶ್ ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.

    ಈ ಮಧ್ಯೆ, ಗಣೇಶ್ ಇತ್ತೀಚಿನ ದಿನಗಳಲ್ಲಿ ನಿರ್ಮಾಣದಲ್ಲಿ ಒಂದಿಷ್ಟು ನಷ್ಟ ಅನುಭವಿಸುವುದರ ಜತೆಗೆ, ಕರೊನಾಗೂ ತುತ್ತಾಗಿದ್ದರಂತೆ. ಕೆಲವು ದಿನಗಳ ಹಿಂದೆ ಅವರ ಟೆಸ್ಟ್ ಮಾಡಿಸಿದಾಗ, ಅವರಿಗೆ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ.

    ಇದನ್ನೂ ಓದಿ: `ಇಂಡಿಯನ್ 2′ ಚಿತ್ರದ ನಂತರ `ಮುದಲ್ವನ್ 2′ … ಚಿತ್ರದ ಹೀರೋ ಯಾರು?

    ಒಂದು ಕಡೆ ಚಿತ್ರದಲ್ಲಿ ನಟಿಸಿದ್ದಿಕ್ಕೆ ಸಿಗದ ಪ್ರತಿಕ್ರಿಯೆ, ಇನ್ನೊಂದು ಕಡೆ ಸೋಲು, ಮತ್ತೊಂದು ಕಡೆ ಕರೊನಾ ಪಾಸಿಟಿವ್ ಎಂಬ ರಿಪೋರ್ಟ್ ಬಂದಿದ್ದು … ಇವೆಲ್ಲದರಿಂದ ಗಣೇಶ್ ಸಾಕಷ್ಟು ಡೌನ್ ಆಗಿದ್ದಾರಂತೆ. ಅಷ್ಟೇ ಅಲ್ಲ, ಮುಂದಿನ ಕೆಲವು ದಿನಗಳ ಕಾಲ ನಟನೆಯಿಂದ ಸ್ವಲ್ಪ ದೂರ ಇರುವುದಕ್ಕೆ ತೀರ್ಮಾನಿಸಿದ್ದಾರಂತೆ.

    ಸಲ್ಮಾನ್, ಬನ್ಸಾಲಿ, ಕರಣ್ ವಿರುದ್ಧದ ಕೇಸ್ ಡಿಸ್ಮಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts