ಪಣಜಿ: ನಾಳೆ ಡಿ. 8ರಂದು ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಕರೆ ನೀಡಿದ್ದು, ಬಹಳಷ್ಟು ಸಂಘಟನೆಗಳು ಬಂದ್ ಮಾಡಲು ಸಾಕಷ್ಟು ತಯಾರಿ ನಡೆಸಿಕೊಂಡಿವೆ. ಈ ನಡುವೆ ಭಾರತ್ ಬಂದ್ ನಮ್ಮಲ್ಲೇನೂ ಪರಿಣಾಮ ಬೀರದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದೊಂದಿಗೆ ಮಾತುಕತೆ ಫಲಪ್ರದವಾಗದ್ದರಿಂದ ಭಾರತ್ ಬಂದ್ಗೆ ಕರೆ ನೀಡಿವೆ. ರಾಷ್ಟ್ರವ್ಯಾಪಿ ಬಂದ್ ನಡೆಸಲು ರೈತ ಸಂಘಟನೆಗಳು ನೀಡಿರುವ ಈ ಕರೆ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಇಂಥದ್ದೊಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ರೈತರ ಹಿತಾಸಕ್ತಿ ಪರವಾಗಿಯೇ ಇವೆ. ಈ ಕಾನೂನುಗಳಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸಲಿದೆ ಎಂದು ಸಮರ್ಥಿಸಿಕೊಂಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಭಾರತ್ ಬಂದ್ ಗೋವಾದಲ್ಲೇನೂ ಪರಿಣಾಮ ಬೀರದು ಎಂದಿದ್ದಾರೆ. ಮತ್ತೊಂದೆಡೆ ಗೋವಾ ಕಾಂಗ್ರೆಸ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. (ಏಜೆನ್ಸೀಸ್)
ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!