More

    ಅಯ್ಯಪ್ಪ ಸ್ವಾಮಿ ಆರಾಧನೆಯಲ್ಲಿ ಪ್ರಕೃತಿ ತತ್ವ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಮತ

    ಕಾರ್ಕಳ: ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ಆರಾಧನೆಯಲ್ಲಿ ಪ್ರಕೃತಿಯ ತತ್ವ ಇದೆ. ಸಾಮರಸ್ಯ ಸಾರುವ ಸಂಕೇತದ ಮೂಲಕ ಜಾತ್ಯತೀತ ಮನೋಧರ್ಮ ಹುದುಗಿದೆ. 48 ದಿನಗಳ ವೃತಾಚರಣೆ ಆರಾಧನೆಯಿಂದ ಸತ್ಯ-ಸತ್ವಗಳನ್ನು ಅರಿತುಕೊಳ್ಳಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

    ಬಜಗೋಳಿ ಮುಂಡಾರು ದಿಡಿಂಬಿರಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ನೂತನ ಶಿಲಾಮಯ ಮಂದಿರದಲ್ಲಿ ಶ್ರೀ ದೇವರ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪೊಡಿಯ ಗುರುಸ್ವಾಮಿ ವೇದಿಕೆಯಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವಕೀಲ ಎಂ.ಕೆ.ವಿಜಯಕುಮಾರ್ ಮಾತನಾಡಿದರು. ಮುಡ್ರಾಲು ಶ್ರೀ ದುರ್ಗಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯವರ್ಮ ಹೆಗ್ಡೆ ಬಹುಮಾನ ವಿತರಿಸಿದರು. ಶ್ರೀ ಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರೇಮಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ನಿರ್ದೇಶಕ ಸುನೀಲ್‌ಕುಮಾರ್, ಭಾರತೀಯ ಸೇನೆಯ ಯೋಧ ಸುನೀಲ್ ವಿ. ಮರಾಠೆ, ಈದು ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ್ ಅಂಚನ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್, ಉದ್ಯಮಿಗಳಾದ ಶ್ಯಾಮ್ ಶೆಟ್ಟಿ, ಸಾಣೂರು ವಿಶ್ವನಾಥ ಶೆಟ್ಟಿ, ಉದಯ ಸಾಲಿಯಾನ್, ಸುಧಾಕರ ಮಡಿವಾಳ, ಸುಂದರ ಬಂಡಾರಿ, ದೈವನರ್ತಕ ಪೂವಪ್ಪ ಪರವ, ಸತ್ಯಸಾರಮಾಣಿ ದೈವಸ್ಥಾನದ ಅಧ್ಯಕ್ಷ ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು. ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಸ್ವಾಗತಿಸಿ, ವಂದಿಸಿದರು.

    ವಿಶ್ವದ ಅತಿ ಹೆಚ್ಚು ಧರ್ಮಗಳು ಹುಟ್ಟಿಕೊಂಡಿರುವುದು ಭಾರತದಲ್ಲಿ. ಇಲ್ಲಿ ಹುಟ್ಟಿಕೊಂಡಿರುವ ಧರ್ಮಗಳೆಲ್ಲವೂ ಸನಾತನದಿಂದ ಪ್ರೇರಿತವಾದುದಾಗಿವೆೆ. ವಿಶ್ವದಲ್ಲಿ ಸನಾತನ ಹಿಂದು ಧರ್ಮವೇ ಪ್ರಬಲವಾಗಿದೆ.
    -ಎಂ.ಕೆ.ವಿಜಯಕುಮಾರ್, ವಕೀಲರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts