More

    ಮತದಾರರ ನೋಂದಣಿ ಜಾಗೃತಿ ಜಾಥಾ

    ಕೊಟ್ಟೂರು: ಪಟ್ಟಣದಲ್ಲಿ ಪದವೀಧರ ಮತದಾರರ ನೋಂದಣಿ ಜಾಗೃತಿ ಜಾಥಾವನ್ನು ಗುರುವಾರ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ ಜಂಟಿಯಾಗಿ ಹಮ್ಮಿಕೊಂಡಿದ್ದವು.

    ನವೆಂಬರ್ 6 ಕೊನೆಯ ದಿನ

    ಅರ್ಹ ಪದವೀಧರರು ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ನವೆಂಬರ್ 6 ಕೊನೆಯ ದಿನವಾಗಿರುತ್ತದೆ. ನಮೂನೆ 18ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆಯ ಗುರುತಿನ ಕಾರ್ಡ್ ದೃಢೀಕರಿಸಿ ಲಗತ್ತಿಸಬೇಕು ಎಂದು ಜಾಥಾದಲ್ಲಿ ಜಾಗೃತಿ ಮೂಡಿಸಲಾಯಿತು.

    ಇದನ್ನೂ ಓದಿ: ನನ್ನ ಸರ್ಕಾರ ತೆಗೆದದ್ದು ಯಾರು? ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

    ತಾಪಂ ಇಒ ವೈ. ರವಿಕುಮಾರ್, ಪಪಂ ಮುಖ್ಯ ಅಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆ ಸಿಇಒ ನಿಂಗಪ್ಪ, ಸ್ವೀಪ್ ಅಧಿಕಾರಿ ಶಶಿಧರ ಮೈದೂರು, ಅಜ್ಜಪ್ಪ. ಡಿ. ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts