More

    ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!

    ನಾಗಪುರ: ತನ್ನ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಬಿಡಿಸಿಕೊಳ್ಳಲು ಬಡ ಆಟೋ ಚಾಲಕನೊಬ್ಬ ತನ್ನ ಮಗನ ಪಿಗ್ಗಿ ಬ್ಯಾಂಕಿನ ನಾಣ್ಯಗಳನ್ನು ತಂದೊಪ್ಪಿಸಿದ ಮನ ಕಲಕುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ದೃಶ್ಯವನ್ನು ನೋಡಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆತನ ಮೇಲಿದ್ದ ದಂಡದ ಮೊತ್ತವನ್ನು ತಾವೇ ಕಟ್ಟಿ ಮಾನವೀಯತೆ ಮೆರೆದಿದ್ದಾರೆ.

    ನಾಗಪುರ ನಗರದ ಆಟೋ ಚಾಲಕ ರೋಹಿತ್​ ಖಡ್ಸೆ ಆಗಸ್ಟ್​ 8 ರಂದು ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಆಟೋ ಮೇಲೆ 200 ರೂ.ಗಳ ಚಲನ್​ ಇಶ್ಯೂ ಮಾಡಲಾಗಿತ್ತು. ನಂತರ ಆತನ ಆಟೋದ ಮೇಲೆ ಹಿಂದಿನ ದಂಡಗಳ ಮೊತ್ತಗಳು ಸೇರಿ 2000 ರೂ.ಗಳ ದಂಡ ಬಾಕಿ ಇದ್ದ ಕಾರಣ, ವಾಹನವನ್ನು ಜಪ್ತಿ ಮಾಡಲಾಗಿತ್ತು.

    ಇದನ್ನೂ ಓದಿ: ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!

    ವಾಹನವಿಲ್ಲದೆ ದುಡಿಮೆ ನಿಲ್ಲುವ ಭಯಕ್ಕೆ ಖಡ್ಸೆ, ಮಗನ ಹಣದ ಗುಲ್ಲಕವನ್ನು ಒಡೆದು ನಾಣ್ಯಗಳನ್ನು ಕವರಿನಲ್ಲಿ ತುಂಬಿಕೊಂಡು ದಂಡ ಕಟ್ಟಲು ಸೀತಾಬರ್ದಿ ಸಾರಿಗೆ ಕಛೇರಿಗೆ ಹೋಗಿದ್ದಾನೆ. ಇದನ್ನು ಕಂಡ ವಪೋನಿಯ ಹಿರಿಯ ಇನ್ಸ್​ಪೆಕ್ಟರ್​ ಅಜಯ್​ ಕುಮಾರ್​ ಮಾಳವೀಯ ಅವರು ತಮ್ಮ ಜೇಬಿನಿಂದ ದುಡ್ಡು ಕಟ್ಟಿ ಚಲನ್​ ತೀರಿಸಿದ್ದಾರೆ. ಹೀಗೆ ವಾಹನವನ್ನು ಬಿಡುಗಡೆ ಮಾಡಿಸಿದ್ದಲ್ಲದೆ, ಮಗುವಿನ ಗುಲ್ಲಕದ ದುಡ್ಡನ್ನು ವಾಪಸ್​ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

    ಹೊಲದಲ್ಲಿ ದಿಢೀರ್​ ಪ್ರತ್ಯಕ್ಷವಾದ ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು, ಪಾಕಿಸ್ತಾನಿ ಧ್ವಜ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts