More

    ಸಂಗೀತ ನಿರ್ದೇಶಕ ಡಾ.ಕಿರಣ್​ ತೋಟಂಬೈಲ್​ ಮೇಲೆ ರಾಡ್​ನಿಂದ ಹಲ್ಲೆ, ತಲೆಗೆ ಗಾಯ

    ಬೆಂಗಳೂರು: ಸಂಗೀತ ನಿರ್ದೇಶಕ, ಡಾ.ಕಿರಣ್ ತೋಟಂಬೈಲ್​ ಅವರ ಮೇಲೆ ದುಷ್ಕರ್ಮಿಗಳು ರಾಡ್​ನಿಂದ ಹಲ್ಲೆ ಮಾಡಿದ್ದು, ಅವರ ತಲೆಗೆ ಗಾಯವಾಗಿದೆ. ನಿನ್ನೆ ತಡರಾತ್ರಿ ಈ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಡಾ.ಕಿರಣ್ ಅವರು ನಿನ್ನೆ ಸಂಚಾರಿ ವಿಜಯ್ ಅವರ ಜನ್ಮದಿನ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿನಗರದ ಗೆಳೆಯರ ಮನೆಯಲ್ಲಿ ‘ಉಸಿರು’ ತಂಡ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿರುವಾಗ ಈ ಘಟನೆ ನಡೆದಿದೆ. ತಡರಾತ್ರಿ 2.30ರ ಸುಮಾರಿಗೆ ಮಾರುತಿ ಸ್ವಿಫ್ಟ್​ ಕಾರಿನಲ್ಲಿ ಬಂದ ಐವರು ಸರಳಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮವಾಗಿ ಕಿರಣ್ ಅವರ ತಲೆಯ ಹಿಂದೆ ಗಾಯವಾಗಿದೆ.

    ಘಟನೆಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ.ಕಿರಣ್​ ಅವರು ಆರ್​.ಚಂದ್ರು ನಿರ್ದೇಶನದ ‘ಐ ಲವ್​ ಯೂ’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದರು.

    ಟೆನ್ಷನ್ ಬಿಡಿ, ಪರೀಕ್ಷೆ ಬರೆಯಿರಿ: ಎರಡೇ ಪ್ರಶ್ನೆಪತ್ರಿಕೆಗಳಲ್ಲಿ 6 ವಿಷಯಗಳು; ಉತ್ತರಕ್ಕೆ ಒಎಂಆರ್ ಶೀಟ್ ಬಳಕೆ

    ರೂಮಾಂಚನ!: ಮತ್ತದೇ ಮುದ ಕ್ಲಬ್​ಹೌಸ್​ನಲ್ಲಿ…

    ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts