ಬೆಂಗಳೂರು: ಹಿಂದೂ ಮುಸ್ಲಿಂ ಸಿಖ್ ಈಸಾಯಿ ಫೆಡರೇಷನ್ ಬೆಂಗಳೂರು ಸಂಘಟನೆ ಗುರುವಾರ ಫ್ರೀಡಂಪಾರ್ಕ್ನಲ್ಲಿ ಆಯೋಜಿಸಿದ್ದ ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಸಮಾವೇಶದ ವೇದಿಕೆ ಮೇಲೆ ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಳು. ಇದರಿಂದಾಗಿ ಸಮಾವೇಶದ ಹಾದಿ ತಪ್ಪಿದ್ದು, ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು.
ಅನಿರೀಕ್ಷಿತ ಬೆಳವಣಿಗೆ ಕಾರಣ, ಸಮಾವೇಶದ ಉದ್ದೇಶ ಈಡೇರದೇ ಹೋಗಿದೆ. ಎಲ್ಲರ ಗಮನವೂ ಆ ಯುವತಿ ಮೇಲೆ ಹೋಗಿದ್ದು, ಆ ಕ್ಷಣದ ಪ್ರತಿಕ್ರಿಯೆ ಹೀಗಿತ್ತು-
ಅಮೂಲ್ಯ ಗೆ ಆಹ್ವಾನ ಕೊಟ್ಟಿಲ್ಲ. ಆಕೆ ಯಾರೆಂಬುದು ಗೊತ್ತಿಲ್ಲ. ತಾನಾಗೆ ಬಂದಿದ್ದಾಳೆ. ಸಮಾವೇಶಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಹೇಳಿಕೆ ಕೊಟ್ಟಿದ್ದಾಳೆ. ಅದೊಂದು ಕುತಂತ್ರದ ಕೆಲಸ. ಹಿಂದೂ-ಮುಸ್ಲಿಂರನ್ನು ಒಗ್ಗೂಡಿಸುವ ಸಮಾವೇಶ. ಸಂವಿಧಾನದ ವಿರೋಧಿ ಹೇಳಿಕೆಗೆ ಅವಕಾಶ ಇಲ್ಲ. ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಹಿಂದಿನ ಉದ್ದೇಶ ಏನೆಂಬುದು ಪೊಲೀಸರು ತನಿಖೆ ಮೂಲಕ ಬಹಿರಂಗವಾಗಲಿ ಎಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಹೇಳಿಕೆ ನೀಡಿದ್ದಾರೆ.
ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಬೆಳವಣಿಗೆಯಿಂದ ಸಿಡಿಮಿಡಿಗೊಂಡು, ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿಗೂ ನಮ್ಮ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ನಾವು ಇಂತಹ ಹೇಳಿಕೆಯನ್ನು ಒಪ್ಪುವುದಿಲ್ಲ. ಸಂಘಟಕರ ತಪ್ಪಿನಿಂದ ಈ ಯುವತಿ ಭಾಷಣ ಮಾಡಿದ್ದಾರೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದರಲ್ಲದೆ, ನಮ್ಮ ಪಾಲಿಗೆ ಭಾರತ್ ಜಿಂದಾಬಾದ್ ಆಗಿತ್ತು, ಮುಂದೆಯೂ ಭಾರತ್ ಜಿಂದಾಬಾದ್ ಆಗಿರಲಿದೆ ಎಂದರು.
Asadduduin Owaisi, AIMIM, in Bengaluru: I condemn this statement. The woman is not associated with us. Humare liye Bharat Zindabad tha, zindabad rahega. pic.twitter.com/DMe4Zvsc9L
— ANI (@ANI) February 20, 2020