ಮಂಗಳೂರು: ಸಾರ್ವಜನಿಕರು ಕುಸಿದು ಬಿದ್ದು, ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇಂದು ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿ ಇದ್ದಾಗಲೇ ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಹೃದಯಾಘಾತದಿಂದ ಸಾವಿಗೀಡಾದ ಆರನೇ ತರಗತಿ ವಿದ್ಯಾರ್ಥಿ; 23-24 ವರ್ಷದವರಿಬ್ಬರು ಕೂಡ ಹಾರ್ಟ್ ಅಟ್ಯಾಕ್ಗೆ ಬಲಿ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಉರ್ವ ಮಾರಿಗುಡಿ ನಿವಾಸಿ, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಬಿ.ಯು. ರಾಜೇಶ್ (45) ಸಾವಿಗೀಡಾದವರು. ಇವರು ಇಂದು ಮಧ್ಯಾಹ್ನ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಎದೆನೋವಿಗೆ ಒಳಗಾಗಿದ್ದರು.
ಇದನ್ನೂ ಓದಿ: ಹೃದಯಾಘಾತ ತಡೆಗಟ್ಟಲು ಇಂತಹ ಆಹಾರ ಸೇವಿಸುವುದು ಒಳ್ಳೆಯದು: ಹಾರ್ವರ್ಡ್ ಅಧ್ಯಯನ
ತಕ್ಷಣ ವಿಶ್ರಾಂತಿ ಪಡೆಯಲೆಂದು ರೆಸ್ಟ್ ರೂಮ್ಗೆ ತೆರಳಿದ ಅವರು ಅಲ್ಲೇ ಕುಸಿದು ಬಿದ್ದು ಸಾವಿಗೀಡಾಗಿದರು. 1993ನೇ ಬ್ಯಾಚ್ ಪೊಲೀಸ್ ಆಗಿರುವ ರಾಜೇಶ್, ಈ ಹಿಂದೆ ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!