ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಚೆನ್ನಾಗಿ ಮೂಡಿಬರುತ್ತಿದೆ. ಅದರಲ್ಲಿ ಅರವಿಂದ್ ಮತ್ತು ದಿವ್ಯಾ ಉರುಡುಗ ಬೆಸ್ಟ್ ಫ್ರೆಂಡ್ಸ್ಗಳಾಗಿಬಿಟ್ಟಿದ್ದಾರೆ. ಯಾವಾಗಲೂ ಜತೆಯೇ ಇರುತ್ತಿದ್ದ ಜೋಡಿ ಮಧ್ಯೆ ಇದೀಗ ಭಿನ್ನಾಭಿಪ್ರಾಯ ಶುರುವಾದಂತೆ ಕಾಣಿಸಲಾರಂಭಿಸಿದೆ.
ಬಿಗ್ಬಾಸ್ ಈ ವಾರ ಕೆಸರಿನೊಳಗೆ ಮುತ್ತನ್ನು ಹುಡುಕುವ ಟಾಸ್ಟ್ ಅನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಮೂರ ಜತೆ ಗ್ಲೌಸ್ ಕೊಡಲಾಗಿದ್ದು, ವೂಟರ್ ಆದಾಗ ಯಾರು ಗ್ಲೌಸ್ಗಳನ್ನು ಮೊದಲು ಹಿಡಿದುಕೊಂಡು ಕೈಗೆ ಧರಿಸುತ್ತಾರೋ ಅವರು ಮುತ್ತು ಹುಡುಕುವುದಕ್ಕೆ ಹೋಗಬಹುದಾಗಿದೆ. ಈ ಸ್ಪರ್ಧೆಗೆ ಮನೆ ಮಂದಿಯೆಲ್ಲ ಸೇರಿಕೊಂಡು ಒಂದು ಒಪ್ಪಂದದ ಮೇಲೆ ನಿಯಮ ಮಾಡಿಕೊಂಡಿದ್ದಾರೆ. ಯಾರೂ ವೂಟರ್ಗಾಗಿ ಕಾಯುತ್ತಾ ಗ್ಲೌಸ್ ಬಳಿಯೇ ನಿಲ್ಲುವುದು ಬೇಡ ಎಂದು ಹೇಳಿಕೊಂಡಿದ್ದಾರೆ.
ಆದರೆ ಈ ನಿಯಮವನ್ನು ಕೆಲ ಸ್ಪರ್ಧಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಗ್ಲೌಸ್ನ ಹತ್ತಿರವೇ ನಿಂತಿಲ್ಲವಾದರೂ ಸ್ವಲ್ಪ ದೂರದಲ್ಲಿ ರೇಸ್ಗೆ ರೆಡಿ ಆದವರಂತೆ ನಿಂತಿದ್ದಾರೆ. ಹಾಗೆ ನಿಂತವರಲ್ಲಿ ದಿವ್ಯಾ ಉರುಡುಗ ಕೂಡ ಒಬ್ಬರು. ಈ ವಿಚಾರ ಅರವಿಂದ್ಗೆ ಸರಿ ಕಂಡಿಲ್ಲ. ಬೇರೆಯವರಿಗೆ ಏನು ನಿಯಮ ಇದೆಯೋ ಅದೇ ನಿಯಮ ನಿಮಗೂ ಇದೆ. ಹಾಗೆ ನಿಲ್ಲುವುದು ಸರಿ ಇಲ್ಲ ಎಂದು ಅರವಿಂದ್ ಹೇಳುತ್ತಾನೆ. ಆಗ ರೇಸ್ ನಿಂತಿದ್ದ ಶುಭಾ, ಬಿಟ್ಟು ಕೊಡೋಣ್ವಾ ಎಂದು ಡಿಯುಗೆ ಕೇಳುತ್ತಾಳೆ. ಅದಕ್ಕೆ ಡಿಯು, ನಾನೇಕೆ ಬಿಟ್ಟುಕೊಡಲಿ, ನಾನು ನಿಂತಿದ್ದೇನೆ, ಆಡೇ ಆಡುತ್ತೇನೆ, ಬೇಕಾದರೆ ಅವರೂ ಬಂದು ನಿಲ್ಲಲಿ ಎಂದು ಹೇಳುತ್ತಾನೆ.
ಅದನ್ನು ಕೇಳಿಸಿಕೊಂಡ ಅರವಿಂದ್ ಸಿಟ್ಟಿನಿಂದ ಏನು ಹೇಳಿದೆ ಮತ್ತೆ ಹೇಳು ಎನ್ನುತ್ತಾನೆ. ಆಗ ಡಿಯು ಮತ್ತೆ ಅದನ್ನೇ ಹೇಳುತ್ತಾನೆ. ಸರಿ ಒಕೆ ಎಂದು ಅರವಿಂದ್ ಸುಮ್ಮನಾಗುತ್ತಾನೆ. ಮನೆಯ ಲೈಟ್ಸ್ ಆಫ್ ಆದಮೇಲೆ ಡಿಯು ಅರವಿಂದ್ ಬಳಿ ಬರುತ್ತಾಳೆ. ಆಗ ಆತ ಸದ್ಯಕ್ಕೆ ಮಾತನಾಡಲು ಇಷ್ಟವಿಲ್ಲ ಎನ್ನುತ್ತಾನೆ. ಡಿಯು ಸುಮ್ಮನೆ ಎದ್ದು ಹೋಗುತ್ತಾಳೆ. ಅದೇ ಮನಸ್ಥಾಪ ಇಂದೂ ಮುಂದುವರಿದಿದೆ ಎನ್ನುವುದು ಕಾರ್ಯಕ್ರಮದ ಜಾಹೀರಾತಿನ ವಿಟಿಯಿಂದಾಗಿ ತಿಳಿದುಬಂದಿದೆ.
ಅದೇನೇ ಆಗಲಿ ಅರ್ವಿಯಾ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದು, ಅವರು ಮಾತ್ರ ಇದರಿಂದಾಗಿ ಸಾಕಷ್ಟು ಬೇಸರಗೊಂಡಿದ್ದಾರೆ. ಈ ಮನಸ್ಥಾಪ ಮುಗಿದು ಜೋಡಿ ಮತ್ತೆ ಈ ಹಿಂದಿನಂತೆಯೇ ಆಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
50 ಡಿಗ್ರಿ ಸೆ. ದಾಟಿದ ತಾಪಮಾನ; ಮಳೆಗಾಗಿ ಮೋಡ ಬಿತ್ತನೆ ಮೊರೆ ಹೋದ ದುಬೈ
ಪ್ರಜಾಪ್ರಭುತ್ವಕ್ಕೆ 5ನೇ ಅಂಗ ಸೇರ್ಪಡೆ! ಯಾವುದು ಅದು? ರಾಯರಡ್ಡಿ ಹೇಳ್ತಾರೆ ಕೇಳಿ…