ಅಸ್ಸಾಂ: ನಿನ್ನೆ (ಅ.21) ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದ ಹೆಲಿಕಾಫ್ಟರ್ನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಇಂದು ಕೊನೆಗೊಂಡಿದೆ.
ಭಾರತೀಯ ವಾಯುಸೇನೆ ಮತ್ತು ಸೇನಾಪಡೆ, ಕೊನೆಯ ಐದನೇ ಮೃತದೇಹ ಪತ್ತೆ ಮಾಡಿ ರಕ್ಷಣಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ತೇಝ್ಪುರದಲ್ಲಿ ಹೇಳಿದರು.
ವರದಿಗಳ ಪ್ರಕಾರ ಸೇನಾಪಡೆಯ ಮೂರು ತುಕಡಿಗಳು ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಇವರನ್ನು ಎರಡು ಹೆಲಿಕಾಪ್ಟರ್ಗಳು ಹುಡುಕುತ್ತಿದ್ದವು. ಐದು ಜನರನ್ನು ಹೊತ್ತಿದ್ದ ಸೇನಾಪಡೆಯ ಎಎಲ್ಎಚ್ ಹೆಲಿಕಾಪ್ಟರ್ ಶುಕ್ರವಾರ ಬೆಳಗ್ಗೆ 10.43ರ ವೇಳೆಗೆ ಅಸ್ಸಾಂನ ಸಿಂಗ್ಗೀಂಗ್ ಹಳ್ಳಿಯ ಬಳಿ ಪತನವಾಗಿತ್ತು.
‘ಪತನವಾದ ಸ್ಥಳದಲ್ಲಿ 4 ಜನರ ಮೃತದೇಹ ಪತ್ತೆಯಾಗಿದ್ದು ಓರ್ವ ನಾಪತ್ತೆ ಆಗಿದ್ದಾರೆ’ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಹಿಂದೆ ಹೇಳಿದ್ದರು. (ಏಜೆನ್ಸೀಸ್)