More

    ಅರುಣಾಚಲ ಹೆಲಿಕಾಪ್ಟರ್ ಪತನ: ಐದನೇ ಮೃತದೇಹ ಪತ್ತೆ, ರಕ್ಷಣಾ ಕಾರ್ಯಾಚರಣೆ ಅಂತ್ಯ…

    ಅಸ್ಸಾಂ: ನಿನ್ನೆ (ಅ.21) ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದ ಹೆಲಿಕಾಫ್ಟರ್​ನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಇಂದು ಕೊನೆಗೊಂಡಿದೆ.

    ಭಾರತೀಯ ವಾಯುಸೇನೆ ಮತ್ತು ಸೇನಾಪಡೆ, ಕೊನೆಯ ಐದನೇ ಮೃತದೇಹ ಪತ್ತೆ ಮಾಡಿ ರಕ್ಷಣಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ತೇಝ್​ಪುರದಲ್ಲಿ ಹೇಳಿದರು.

    ವರದಿಗಳ ಪ್ರಕಾರ ಸೇನಾಪಡೆಯ ಮೂರು ತುಕಡಿಗಳು ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಇವರನ್ನು ಎರಡು ಹೆಲಿಕಾಪ್ಟರ್​ಗಳು ಹುಡುಕುತ್ತಿದ್ದವು. ಐದು ಜನರನ್ನು ಹೊತ್ತಿದ್ದ ಸೇನಾಪಡೆಯ ಎಎಲ್​ಎಚ್​ ಹೆಲಿಕಾಪ್ಟರ್ ಶುಕ್ರವಾರ ಬೆಳಗ್ಗೆ 10.43ರ ವೇಳೆಗೆ ಅಸ್ಸಾಂನ ಸಿಂಗ್ಗೀಂಗ್ ಹಳ್ಳಿಯ ಬಳಿ ಪತನವಾಗಿತ್ತು.

    ‘ಪತನವಾದ ಸ್ಥಳದಲ್ಲಿ 4 ಜನರ ಮೃತದೇಹ ಪತ್ತೆಯಾಗಿದ್ದು ಓರ್ವ ನಾಪತ್ತೆ ಆಗಿದ್ದಾರೆ’ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಹಿಂದೆ ಹೇಳಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts