ಸಿರವಾರ: ನಾಡಿಗೆ ಅಮರಶಿಲ್ಪಿ ಜಕಣಾಚಾರಿಯರ ಕೊಡುಗೆ ಅಪಾರ ಇವರ ಕಲೆ ಎಂಥವರನ್ನು ಮಂತ್ರಮುಗ್ಧರಾನ್ನಗಿಸುತ್ತದೆ ಎಂದು ತಹಸೀಲ್ದಾರ ರವಿ ಎಸ್.ಅಂಗಡಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆಯಲ್ಲಿ ಸೋಮವಾರ ಮಾತನಾಡಿದರು. ಚಿತ್ರ ಬಿಡಿಸುವುದಕ್ಕೆ ಕಷ್ಟವಾಗುವಂತದ್ದನ್ನು ಅವರು ಕಲ್ಲಿನಲ್ಲಿ ಕೆತ್ತುವ ಮೂಲಕ ನಾಡಿನ ಕೀರ್ತಿಯನ್ನು ಜಗತ್ತಿಗೆ ಪಸರಿಸಿದ್ದಾರೆ. ಕಲೆಗಳ ರಕ್ಷಣೆ ಎಲ್ಲರ ಹೊಣೆ ಎಂದರು.
ಅಮರಶಿಲ್ಪಿ ಜಕಣಾಚಾರಿಯರ ಕೊಡುಗೆ ಅಪಾರ
ಸಿರವಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯಣ್ಣ ಏರೆಡ್ಡಿ, ಶೀರಸ್ತೆದಾರ ಫಕ್ರುದ್ದಿನ್, ಸಿಬ್ಬಂದಿಗಳಾದ ಲಾವಣ್ಯ, ಶ್ರೀದೇವಿ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ, ಸಿದ್ದರಾಮೇಶ್ವರ ಪತ್ತಾರ್, ವೀರೇಶ ಪತ್ತಾರ, ಸೂಗು ಬಡಿಗೇರ್ ಇದ್ದರು.