ನವದೆಹಲಿ: ಚೀನಾಕ್ಕೆ ಹೊಂದಿಕೊಂಡಿರುವ ವಾಸ್ತವ ಗಡಿರೇಖೆಯಲ್ಲಿ ಲೇಹ್ನಿಂದ ಲಡಾಖ್ವರೆಗೆ 4 ಕಡೆಗಳಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಜಟಾಪಟಿ ಸಂಭವಿಸುತ್ತಲೇ ಇದೆ. ಈ ಜಟಾಪಟಿಯನ್ನು ಕೊನೆಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸೇನಾಧಿಕಾರಿಗಳು 5 ಸುತ್ತಿನ ಮಾತುಕತೆ ನಡೆಸಿದ್ದರೂ ಅವೆಲ್ಲವೂ ವಿಫಲವಾಗಿವೆ ಎನ್ನಲಾಗಿದೆ. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರ್ವಾನೆ ಶುಕ್ರವಾರ ಲೇಹ್ಗೆ ದಿಢೀರ್ ಭೇಟಿ ನೀಡಿ, ಲಡಾಖ್ನ 14 ಕೋರ್ನ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ವಾಸ್ತವ ಗಡಿರೇಖೆಯಲ್ಲಿ ಇರುವ ವಿವಾದಾತ್ಮಕ ಸ್ಥಳಗಳಲ್ಲಿನ ಕಾರ್ಯಾಚರಣೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಅಂದಾಜು ಅರ್ಧ ದಿನ ಅಲ್ಲಿದ್ದ ಅವರು 14 ಕೋರ್ನ ಮುಖ್ಯಸ್ಥರ ಜತೆಗೆ ವಿಸ್ತೃತ ಮಾತುಕತೆ ನಡೆಸಿದರು ಎನ್ನಲಾಗಿದೆ.
ಇದನ್ನೂ ಓದಿ: ಪಾಕ್ ವಿಮಾನ ಅಪಘಾತದಲ್ಲಿ ಬದುಕುಳಿದವನಿಗೆ ಇದೆ ಭಾರತದ ಕನೆಕ್ಷನ್!
ಸಾಮಾನ್ಯವಾಗಿ ಲೇಹ್ ಮತ್ತು ಲಡಾಖ್ ಪ್ರದೇಶಗಳಿಗೆ ಸೇನಾಪಡೆ ಮುಖ್ಯಸ್ಥರು ಭೇಟಿ ಕೊಡುತ್ತಾರೆ ಎಂದರೆ ಆ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿರುತ್ತದೆ. ಆದರೆ, ಈ ಬಾರಿ ಜನರಲ್ ಎಂ.ಎಂ. ನರ್ವಾನೆ ಅವರ ದಿಢೀರ್ ಭೇಟಿ ಅಚ್ಚರಿಗೆ ಕಾರಣವಾಗಿದೆ. ಉತ್ತರ ಕಮಾಂಡ್ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಅವರು ಸೇನಾಪಡೆ ಮುಖ್ಯಸ್ಥರಿಗೆ ಸಾಥ್ ನೀಡಿದ್ದರು. ಆದರೆ ಇವರಿಬ್ಬರು ಸೇನಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿಲ್ಲ ಎಂದು ಹೇಳಲಾಗಿದೆ.
ಭಾರತ ಮತ್ತು ಚೀನಾ ವಾಸ್ತವ ಗಡಿರೇಖೆ ಬಳಿ ಹೆಚ್ಚುವರಿ ಸೇನಾಪಡೆಯನ್ನು ಜಮಾವಣೆಗೊಳಿಸಿವೆ. ಲಡಾಖ್ನ ಪೂರ್ವ ಭಾಗದ ಪ್ಯಾಂಗಾಂಗ್ ತ್ಸೋದ ಉತ್ತರ ತಟ, ಡೆಮ್ಚಾಕ್ ಮತ್ತು ಗಲ್ವಾನ್ ಕಣಿವೆ ಪ್ರದೇಶ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಉಭಯ ರಾಷ್ಟ್ರಗಳು ಸೇನೆ ಜಮಾವಣೆಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಭಾಗಗಳಲ್ಲಿ ಮೇ 5 ಮತ್ತು 6ರಂದು ಭಾರತ ಮತ್ತು ಚೀನಾದ ಅಂದಾಜು 250 ಯೋಧರು ಪರಸ್ಪರ ಹೊಯ್ಕೈ ನಡೆಸಿದ್ದರು. ಅಲ್ಲದೆ, ಕಲ್ಲು ತೂರಾಟ ಮಾಡಿದ್ದರಿಂದ, ಕೆಲ ಯೋಧರು ಗಾಯಗೊಂಡಿದ್ದರು. ಆನಂತರದಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್ಸ್ಟಿಕ್ ಕಿಂಗ್- ಈತನ ಸಿಂಗಲ್ಸ್ನ ವಹಿವಾಟು 1,100 ಕೋಟಿ ರೂಪಾಯಿ!