ನವದೆಹಲಿ : ಭಾರತದಲ್ಲಿ 269 ವೈದ್ಯರು ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾವಪ್ಪಿದ್ದಾರೆ ಎಂದು ನಿನ್ನೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಹೇಳಿತ್ತು. ಅತ್ಯಧಿಕ ಸಂಖ್ಯೆಯಲ್ಲಿ, 78 ವೈದ್ಯರ ಸಾವು ಸಂಭವಿಸಿರುವುದು ಬಿಹಾರದಲ್ಲಾದರೆ, ಉತ್ತರ ಪ್ರದೇಶದಲ್ಲಿ 37 ಮತ್ತು ದೆಹಲಿಯಲ್ಲಿ 29 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ ಎಂದು ಐಎಂಎ ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಅಪೋಲೋ ಹಾಸ್ಪಿಟಲ್ಸ್ ಗುಂಪಿನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ (ಜೆಎಂಡಿ) ಡಾ. ಸಂಗೀತಾ ರೆಡ್ಡಿ ಅವರು, ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕರೊನಾ ಲಸಿಕೆ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.
This is indeed very sad & while I mourn the loss I would like to share IMP data -Out of 3600 Dr Nurses & #healthcareworkers #vaccinated with 2 doses @HospitalsApollo Delhi ONLY 2.6% got infected with mild #COVID19 & NO death! I appeal 🙏#Vaccination & #Safety protocols save lives https://t.co/VTQB9PFa2D
— Dr. Sangita Reddy (@drsangitareddy) May 18, 2021
ದೆಹಲಿಯ ಅಪೋಲೋ ಆಸ್ಪತ್ರೆಗಳಲ್ಲಿ ಎರಡೂ ಡೋಸ್ ಕರೊನಾ ಲಸಿಕೆ ಪಡೆದ 3,600 ವೈದ್ಯರು, ನರ್ಸ್ಗಳು ಮತ್ತು ಆರೋಗ್ಯ ಸೇವಾಕರ್ತರಲ್ಲಿ ಕೇವಲ ಶೇ 2.6 ರಷ್ಟು ಮಂದಿಗೆ ಕರೊನಾ ಸೋಂಕು ತಗುಲಿತು. ಅವರೆಲ್ಲರಿಗೂ ಮೆದು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಒಂದೂ ಸಾವು ಸಂಭವಿಸಿಲ್ಲ ಎಂದು ಡಾ. ರೆಡ್ಡಿ ತಿಳಿಸಿದ್ದಾರೆ. ಲಸಿಕೆ ಪಡೆಯುವುದು ಮತ್ತು ಸುರಕ್ಷತೆಯ ಪ್ರೊಟೋಕಾಲ್ಗಳನ್ನು ಪಾಲಿಸುವುದು ಪ್ರಾಣಗಳನ್ನು ಉಳಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)
ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !