More

    ಲಸಿಕೆಯಿಂದ ಪ್ರಾಣರಕ್ಷಣೆ : ಅಪೋಲೋ ಜೆಎಂಡಿ ಡಾ. ಸಂಗೀತ ರೆಡ್ಡಿ

    ನವದೆಹಲಿ : ಭಾರತದಲ್ಲಿ 269 ವೈದ್ಯರು ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾವಪ್ಪಿದ್ದಾರೆ ಎಂದು ನಿನ್ನೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​(ಐಎಂಎ) ಹೇಳಿತ್ತು. ಅತ್ಯಧಿಕ ಸಂಖ್ಯೆಯಲ್ಲಿ, 78 ವೈದ್ಯರ ಸಾವು ಸಂಭವಿಸಿರುವುದು ಬಿಹಾರದಲ್ಲಾದರೆ, ಉತ್ತರ ಪ್ರದೇಶದಲ್ಲಿ 37 ಮತ್ತು ದೆಹಲಿಯಲ್ಲಿ 29 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ ಎಂದು ಐಎಂಎ ತಿಳಿಸಿತ್ತು.

    ಇದಕ್ಕೆ ಪ್ರತಿಕ್ರಿಯಿಸಿರುವ ಅಪೋಲೋ ಹಾಸ್ಪಿಟಲ್ಸ್​ ಗುಂಪಿನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ (ಜೆಎಂಡಿ) ಡಾ. ಸಂಗೀತಾ ರೆಡ್ಡಿ ಅವರು, ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕರೊನಾ ಲಸಿಕೆ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

    ದೆಹಲಿಯ ಅಪೋಲೋ ಆಸ್ಪತ್ರೆಗಳಲ್ಲಿ ಎರಡೂ ಡೋಸ್​ ಕರೊನಾ ಲಸಿಕೆ ಪಡೆದ 3,600 ವೈದ್ಯರು, ನರ್ಸ್​ಗಳು ಮತ್ತು ಆರೋಗ್ಯ ಸೇವಾಕರ್ತರಲ್ಲಿ ಕೇವಲ ಶೇ 2.6 ರಷ್ಟು ಮಂದಿಗೆ ಕರೊನಾ ಸೋಂಕು ತಗುಲಿತು. ಅವರೆಲ್ಲರಿಗೂ ಮೆದು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಒಂದೂ ಸಾವು ಸಂಭವಿಸಿಲ್ಲ ಎಂದು ಡಾ. ರೆಡ್ಡಿ ತಿಳಿಸಿದ್ದಾರೆ. ಲಸಿಕೆ ಪಡೆಯುವುದು ಮತ್ತು ಸುರಕ್ಷತೆಯ ಪ್ರೊಟೋಕಾಲ್​ಗಳನ್ನು ಪಾಲಿಸುವುದು ಪ್ರಾಣಗಳನ್ನು ಉಳಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

    VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

    ಚಿಂಕಾರ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

    ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts