ಮುಂಬೈ: ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಅನೇಕರು ವಿರೋಧಿಸುತ್ತಾರೆ…ದ್ವೇಷಿಸುತ್ತಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಒಂದು ಹತ್ಯೆ, ಅದರ ತನಿಖೆ ಆಗಬೇಕು ಎಂದು ಅರ್ನಬ್ ಗೋಸ್ವಾಮಿ ತಮ್ಮದೇ ಧಾಟಿಯಲ್ಲಿ ಡಿಬೇಟ್ ಮಾಡುತ್ತಿದ್ದಾರೆ. ಬಾಲಿವುಡ್ನ ಹುಳುಕುಗಳನ್ನೂ ಎತ್ತೆತ್ತಿ ಆಡುತ್ತಿದ್ದಾರೆ.
ಹೀಗೆ ಅರ್ನಬ್ ಗೋಸ್ವಾಮಿಯವರನ್ನು ವಿರೋಧಿಸುತ್ತಿರುವವರಲ್ಲಿ ಬಾಲಿವುಡ್ ನಟ ಅನುರಾಗ್ ಕಶ್ಯಪ್ ಕೂಡ ಒಬ್ಬರು. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರು ಇಂದು ಸೀದಾ ಅರ್ನಬ್ ಗೋಸ್ವಾಮಿ ಅವರ ನ್ಯೂಸ್ ಚಾನೆಲ್ ಆಫೀಸ್ಗೆ ತೆರಳಿದ್ದಾರೆ. ಸುಮ್ಮನೆ ಹೋಗಿಲ್ಲ..ಬದಲಿಗೆ ಚಪ್ಪಲಿಗಳಿಗೆ ಫ್ರೇಮ್ ಹಾಕಿಸಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಇವರೊಂದಿಗೆ ಕಾಮಿಡಿಯನ್ ಕುನಾಲ್ ಕಮ್ರಾ ಕೂಡ ಇದ್ದರು. ಇಬ್ಬರ ಕೈಯಲ್ಲೂ ಒಂದೊಂದು ಫ್ರೇಂ ಹಾಕಿರುವ ಚಪ್ಪಲಿಗಳಿವೆ. ಅದರ ಕೆಳಗೆ ಅವಾರ್ಡ್ ಟು ಅರ್ನಬ್ ಗೋಸ್ವಾಮಿ ಎಂದು ಬರೆದುಕೊಂಡಿದೆ. ಇದನ್ನೂ ಓದಿ: VIDEO: ರಸ್ತೆಬದಿಯಲ್ಲಿ ಮೃತದೇಹವಿದೆ ಎಂಬ ಕರೆಯಿಂದ ಸ್ಥಳಕ್ಕೆ ಹೋದ ಪೊಲೀಸರಿಗೆ ದೊಡ್ಡ ಶಾಕ್
ಅನುರಾಗ್ ಕಶ್ಯಪ್ ಅವರು ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ಇಲ್ಲಿಯವರೆಗಿನ ಅತ್ಯುತ್ತಮ ಬರ್ತ್ ಡೇ. ಪತ್ರಿಕೋದ್ಯಮದಲ್ಲೇ ಅತ್ಯಂತ ಶ್ರೇಷ್ಠ ಸಾಧನೆ ಮಾಡಿರುವ ಅರ್ನಬ್ ಗೋ ಸ್ವಾಮಿಯವರಿಗೆ ಪ್ಯಾರಗಾನ್ ಎಕ್ಸಲೆನ್ಸ್ ಇನ್ ಜರ್ನಲಿಸಂ ಅವಾರ್ಡ್ ಕೊಡಲು ನಾನು ಮತ್ತು ಕುನಾಲ್ ಕಮ್ರಾ ರಿಪಬ್ಲಿಕ್ ಕಚೇರಿಗೆ ತೆರಳಿದ್ದವು. ಆದರೆ ಒಳ ಪ್ರವೇಶಿಸಲು ಅನುಮತಿ ಸಿಗಲಿಲ್ಲ. ಹಾಗಾಗಿ ಅವಾರ್ಡ್ ಕೊಡಲು ಆಗಲಿಲ್ಲ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಅನುರಾಗ್ ಕಶ್ಯಪ್ ಅಭಿಮಾನಿಗಳು, ಫಾಲೋವರ್ಸ್ ಫೋಟೋವನ್ನು ನೋಡಿ ನಗುತ್ತಿದ್ದಾರೆ. ಇಂದು ಪ್ರವೇಶ ಸಿಗದೆ ಇದ್ದರೆ ನಾಳೆ ಮತ್ತೊಮ್ಮೆ ಪ್ರಯತ್ನಿಸಿ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. (ಏಜೆನ್ಸೀಸ್)