More

    ಚಪ್ಪಲಿಗಳಿಗೆ ಫ್ರೇಮ್​ ಹಾಕಿಸಿ ಅರ್ನಬ್​ ಗೋಸ್ವಾಮಿ ಆಫೀಸ್​ಗೆ ತೆಗೆದುಕೊಂಡು ಹೋದ ಅನುರಾಗ್ ಕಶ್ಯಪ್​

    ಮುಂಬೈ: ಪತ್ರಕರ್ತ ಅರ್ನಬ್​ ಗೋಸ್ವಾಮಿಯನ್ನು ಅನೇಕರು ವಿರೋಧಿಸುತ್ತಾರೆ…ದ್ವೇಷಿಸುತ್ತಾರೆ. ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಒಂದು ಹತ್ಯೆ, ಅದರ ತನಿಖೆ ಆಗಬೇಕು ಎಂದು ಅರ್ನಬ್​ ಗೋಸ್ವಾಮಿ ತಮ್ಮದೇ ಧಾಟಿಯಲ್ಲಿ ಡಿಬೇಟ್​ ಮಾಡುತ್ತಿದ್ದಾರೆ. ಬಾಲಿವುಡ್​ನ ಹುಳುಕುಗಳನ್ನೂ ಎತ್ತೆತ್ತಿ ಆಡುತ್ತಿದ್ದಾರೆ.

    ಹೀಗೆ ಅರ್ನಬ್​ ಗೋಸ್ವಾಮಿಯವರನ್ನು ವಿರೋಧಿಸುತ್ತಿರುವವರಲ್ಲಿ ಬಾಲಿವುಡ್ ನಟ ಅನುರಾಗ್ ಕಶ್ಯಪ್​ ಕೂಡ ಒಬ್ಬರು. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರು ಇಂದು ಸೀದಾ ಅರ್ನಬ್​ ಗೋಸ್ವಾಮಿ ಅವರ ನ್ಯೂಸ್​ ಚಾನೆಲ್​ ಆಫೀಸ್​ಗೆ ತೆರಳಿದ್ದಾರೆ. ಸುಮ್ಮನೆ ಹೋಗಿಲ್ಲ..ಬದಲಿಗೆ ಚಪ್ಪಲಿಗಳಿಗೆ ಫ್ರೇಮ್​ ಹಾಕಿಸಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಇವರೊಂದಿಗೆ ಕಾಮಿಡಿಯನ್​ ಕುನಾಲ್ ಕಮ್ರಾ ಕೂಡ ಇದ್ದರು. ಇಬ್ಬರ ಕೈಯಲ್ಲೂ ಒಂದೊಂದು ಫ್ರೇಂ ಹಾಕಿರುವ ಚಪ್ಪಲಿಗಳಿವೆ. ಅದರ ಕೆಳಗೆ ಅವಾರ್ಡ್​ ಟು ಅರ್ನಬ್ ಗೋಸ್ವಾಮಿ ಎಂದು ಬರೆದುಕೊಂಡಿದೆ. ಇದನ್ನೂ ಓದಿ: VIDEO: ರಸ್ತೆಬದಿಯಲ್ಲಿ ಮೃತದೇಹವಿದೆ ಎಂಬ ಕರೆಯಿಂದ ಸ್ಥಳಕ್ಕೆ ಹೋದ ಪೊಲೀಸರಿಗೆ ದೊಡ್ಡ ಶಾಕ್

    ಅನುರಾಗ್​ ಕಶ್ಯಪ್​ ಅವರು ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ನನ್ನ ಇಲ್ಲಿಯವರೆಗಿನ ಅತ್ಯುತ್ತಮ ಬರ್ತ್​ ಡೇ. ಪತ್ರಿಕೋದ್ಯಮದಲ್ಲೇ ಅತ್ಯಂತ ಶ್ರೇಷ್ಠ ಸಾಧನೆ ಮಾಡಿರುವ ಅರ್ನಬ್​ ಗೋ ಸ್ವಾಮಿಯವರಿಗೆ ಪ್ಯಾರಗಾನ್​ ಎಕ್ಸಲೆನ್ಸ್​ ಇನ್ ಜರ್ನಲಿಸಂ ಅವಾರ್ಡ್​ ಕೊಡಲು ನಾನು ಮತ್ತು ಕುನಾಲ್​ ಕಮ್ರಾ ರಿಪಬ್ಲಿಕ್​ ಕಚೇರಿಗೆ ತೆರಳಿದ್ದವು. ಆದರೆ ಒಳ ಪ್ರವೇಶಿಸಲು ಅನುಮತಿ ಸಿಗಲಿಲ್ಲ. ಹಾಗಾಗಿ ಅವಾರ್ಡ್​ ಕೊಡಲು ಆಗಲಿಲ್ಲ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

    ಅನುರಾಗ್​ ಕಶ್ಯಪ್​ ಅಭಿಮಾನಿಗಳು, ಫಾಲೋವರ್ಸ್​ ಫೋಟೋವನ್ನು ನೋಡಿ ನಗುತ್ತಿದ್ದಾರೆ. ಇಂದು ಪ್ರವೇಶ ಸಿಗದೆ ಇದ್ದರೆ ನಾಳೆ ಮತ್ತೊಮ್ಮೆ ಪ್ರಯತ್ನಿಸಿ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts