More

    ಟೈಮ್ ಔಟ್ ವಿವಾದ; ಬಾಂಗ್ಲಾದಿಂದ ಇಂತಹ ಕೀಳು ಮಟ್ಟದ ಆಟವನ್ನು ನಿರೀಕ್ಷಿಸಿರಲಿಲ್ಲ: ಏಂಜಲೊ ಮ್ಯಾಥ್ಯೂಸ್

    ನವದೆಹಲಿ: ಸೋಮವಾರ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯದ ವೇಳೆ ಟೈಮ್​ ಔಟ್​ ಕಾರಣ ನೀಡಿ ಬ್ಯಾಟ್ಸಮನ್​ ಏಂಜಲೊ ಮ್ಯಾಥ್ಯೂಸ್​ ಅವರನ್ನು ಔಟ್​ ಎಂದು ಅಂಪೈರ್​ಗಳು ಘೋಷಿಸಿದ್ದರು. ಈ ವಿಚಾರ ಇದೀಗ ಕ್ರಿಕೆಟ್​ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡವು 49.3 ಓವರ್​ಗಳಲ್ಲಿ 279ರನ್​ಗಳಿಗೆ ಆಲೌಟ್​ ಆಯಿತು. ಗುರ ಬೆನ್ನತ್ತಿದ್ದ ಬಾಂಗ್ಲಾದೇಶ ತಂಡವು 41.1 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 282 ರನ್​ಗಳಿಸಿ ಗೆಲುವಿನ ನಗೆ ಬೀರಿತ್ತು.

    ಈ ಪಂದ್ಯದ ಮಧ್ಯೆ ದೊಡ್ಡ ಡ್ರಾಮವೇ ನಡೆದು ಹೋಯಿತು. ಲಂಕಾ ಬ್ಯಾಟಿಂಗ್ ಇನ್ನಿಂಗ್ಸ್​ನ 25ನೇ ಓವರ್‌ನಲ್ಲಿ ಸಮರವಿಕ್ರಮ ಔಟಾದ ಬಳಿಕ ಕ್ರೀಸ್​ಗಿಳಿದ ಮ್ಯಾಥ್ಯೂಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್​ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟೆಂದು ತೀರ್ಪು ನೀಡಿದರು.

    ಬಾಂಗ್ಲಾ ಬ್ಯಾಟಿಂಗ್ ಮಾಡುವ ವೇಳೆ ಶಕಿಬ್ ಅವರು ಮ್ಯಾಥ್ಯೂಸ್ ಬೌಲಿಂಗ್​ನಲ್ಲೇ ಔಟ್ ಆದರು. ಈ ಸಂದರ್ಭ ಮ್ಯಾಥ್ಯೂಸ್ ‘ನಿನ್ ಟೈಮ್ ಆಯ್ತು’ ಎಂಬಂತೆ ಸನ್ನೆ ಮಾಡಿ ಪೆವಿಲಿಯನ್​​ಗೆ ಹೋಗು ಎಂದರು. ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರರು ಬಾಂಗ್ಲಾ ಆಟಗಾರರ ಜೊತೆ ಹಸ್ತಲಾಘವ ಮಾಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಇದನ್ನೂ ಓದಿ: ಮಾಜಿ ಸಂಸದ, ಹಿರಿಯ ಬಿಜೆಪಿ ನಾಯಕ ಡಿ.ಬಿ. ಚಂದ್ರೇಗೌಡ ನಿಧನ

    ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಏಂಜಲೋ ಮ್ಯಾಥ್ಯೂಸ್, ನಾನೇನೂ ತಪ್ಪು ಮಾಡಿಲ್ಲ. ನಾನು ತಯಾರಾಗಲು ಎರಡು ನಿಮಿಷಗಳ ಕಾಲಾವಕಾಶವಿತ್ತು, ಆದರೆ ಹೆಲ್ಮೆಟ್​ನಲ್ಲಿ ತೊಂದರೆಯಾಗಿತ್ತು. ಇವರಿಗೆ ಕಾಮನ್​ಸೆನ್ಸ್​ ಇಲ್ಲ ಎಂಬುದು ತೋರಿಸುತ್ತದೆ. ಇದು ಶಕೀಬ್ ಮತ್ತು ಬಾಂಗ್ಲಾದೇಶದಿಂದ ಅವಮಾನಕರವಾಗಿದೆ. ಇಷ್ಟು ಕೆಳ ಮಟ್ಟಕ್ಕೆ ಇಳಿದು ಕ್ರಿಕೆಟ್ ಆಡುವುದು ತಪ್ಪು.

    ನಿಯಮಗಳ ಪ್ರಕಾರ, ನಾನು ಎರಡು ನಿಮಿಷಗಳಲ್ಲಿ ತಯಾರಾಗಬೇಕು, ನನಗೆ ಅಲ್ಲಿ ಇನ್ನೂ ಐದು ಸೆಕೆಂಡುಗಳು ಕಾಲಾವಕಾಶವಿತ್ತು. ಈರೀತಿಯ ಘಟನೆ ಅವಮಾನಕರವಾಗಿದೆ. ನಮ್ಮನ್ನು ಗೌರವಿಸುವ ಜನರನ್ನಷ್ಟೆ ನಾವೂ ಗೌರವಿಸುತ್ತೇವೆ. ನಾವೆಲ್ಲರೂ ಉತ್ತಮವಾಗಿ ಕ್ರಿಕೆಟ್ ಆಡಲು ಬಂದಿದ್ದೇವೆ. ನೀವು ಇದಕ್ಕೆ ಗೌರವ ಕೊಡದಿದ್ದರೆ ಇನ್ನೇನು ಹೇಳಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

    ಇಂದಿನವರೆಗೂ ನಾನು ಶಕೀಬ್ ಮತ್ತು ಬಾಂಗ್ಲಾದೇಶ ತಂಡದ ಬಗ್ಗೆ ಗೌರವವನ್ನು ಹೊಂದಿದ್ದೆ. ಆದರೀಗ ಆ ಗೌರವವೆಲ್ಲ ಹೋಗಿದೆ. ನಾವೆಲ್ಲರೂ ಗೆಲ್ಲಲು ಆಡುತ್ತೇವೆ, ಅದು ನಿಯಮದೊಳಗೆ ಇದ್ದರೆ ಉತ್ತಮ. ಆದರೆ ಎರಡು ನಿಮಿಷಗಳಲ್ಲಿ ನಾನು ಅಲ್ಲಿದ್ದೆ… ನಮ್ಮ ಬಳಿ ವಿಡಿಯೋ ಸಾಕ್ಷ್ಯವಿದೆ. ಇದನ್ನು ನಾವು ಹೊರಗಡೆ ತರುತ್ತೇವೆ. ನಾನು ಸಾಕ್ಷಿಯೊಂದಿಗೆ ಮಾತನಾಡುತ್ತಿದ್ದೇನೆ. ನನ್ನ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಈ ಮಟ್ಟಕ್ಕೆ ಇಳಿದ ತಂಡವನ್ನು ನಾನು ನೋಡಿರಲಿಲ್ಲ. ನಾನು ಅಲ್ಲಿ ಬೇಕೆಂದು ಸಮಯ ವ್ಯರ್ಥ ಮಾಡಲಿಲ್ಲ ಎಂಬುದು ಶಕೀಬ್‌ ಅವರಿಗೆ ಕೂಡ ತಿಳಿದಿತ್ತು. ಇದು ಸಾಮಾನ್ಯ ವಿಷಯ ಆಗಿರುವುದರಿಂದ ಅಂಪೈರ್ ಬಳಿ ಹೋಗದೆ ಮಾನವೀಯತೆ ಮೆರೆಯಬಹುದಿತ್ತು. ಆದರೆ ಅವರು ಬೇರೆ ದಾರಿ ಹಿಡಿದರು ಎಂದು ಪಂದ್ಯದ ಬಳಿಕ ಏಂಜಲೋ ಮ್ಯಾಥ್ಯೂಸ್​ ಬಾಂಗ್ಲಾದೇಶದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts