ಹೈದರಾಬಾದ್: ಜನರ ಪ್ರತಿನಿಧಿಯಾಗಿ ಕೆಲಸ ಮಾಡುವ ಸರ್ಕಾರದ ಕಾರ್ಯಗಳಲ್ಲಿ ನ್ಯಾಯಾಂಗವು ಹಸ್ತಕ್ಷೇಪ ನಡೆಸುತ್ತಿದೆ ಎಂದು ಆಂಧ್ರಪ್ರದೇಶ ಸ್ಪೀಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಿರುಪತಿಗೆ ಆಗಮಿಸಿದ್ದ ಸ್ಪೀಕರ್ ತಮ್ಮನೇನಿ ಸೀತಾರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಧೀಶರು ಸರ್ಕಾರ ನಡೆಸಬೇಕೆಂದು ಬಯಸುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಇದನ್ನೂ ಓದಿ; ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್ ಮಾರ್ಕೆಟ್ನ ಪಾರ್ಕಿಂಗ್ ತಾಣಗಳು
ಸರ್ಕಾರ ಏನು ಮಾಡಬೇಕೆಂಬುದನ್ನು ಕೋರ್ಟ್ ನಿರ್ಧಾರ ಮಾಡುವುದಾದಲ್ಲಿ ಚುನಾವಣೆಯ ಅಗತ್ಯವೇನಿದೆ? ಜನರು ಶಾಸಕರು, ಸಂಸದರನ್ನು ಏಕೆ ಆಯ್ಕೆ ಮಾಡಬೇಕು? ಆಡಳಿತ ನಡೆಸಲು ಮುಖ್ಯಮಂತ್ರಿ ಯಾಕಿರಬೇಕು? ವಿಧಾನಸಭೆ, ಸ್ಪೀಕರ್ ಅಗತ್ಯವೇನು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ನ್ಯಾಯಾಧೀಶರು ಕೋರ್ಟ್ ಹಾಲ್ಗಳಿಂದಲೇ ನೇರವಾಗಿ ಸರ್ಕಾರವನ್ನು ನಡೆಸುತ್ತ ರಾಜ್ಯವನ್ನು ಆಳಲು ಬಯಸುತ್ತಾರಾ ಎಂದು ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್ ಮಾ ಪ್ರತಿಸ್ಪರ್ಧಿ
ಆಡಳಿತಾರೂಢ ಜಗನ್ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಹಲವು ತೀರ್ಪಗಳು ಬಂದ ಹಿನ್ನೆಲೆಯಲ್ಲಿ ಸೀತಾರಾಮ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಲಿತ ವೈದ್ಯನ ಮೇಲೆ ಹಲ್ಲೆಯ ಸಿಬಿಐ ತನಿಖೆ, ಚುನಾವಣಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ನಿಮ್ಮಗಢ ರಮೇಶ್ಕುಮಾರ್ ಮರುನೇಮಕ, ಸರ್ಕಾರ ಕಟ್ಟಡಗಳ ಮೇಲಿದ್ದ ವೈಎಸ್ಆರ್ ಪಕ್ಷದ ಬಣ್ಣವನ್ನು ತೆಗೆಸಿದ್ದು, ಗುಪ್ತಚರದ ವಿಭಾಗದ ನಿವೃತ್ತ ಮುಖ್ಯಸ್ಥನ ಅಮಾನತು ರದ್ದುಪಡಿಸಿದ್ದು… ಹೀಗೆ ಹಲವು ತೀರ್ಪುಗಳು ಸರ್ಕಾರದ ಮುಖಭಂಗಕ್ಕೆ ಕಾರಣವಾಗಿದ್ದರಿಂದ ಸ್ಪೀಕರ್ ನ್ಯಾಯಾಲಯಗಳ ವಿರುದ್ಧ ಹಾಯ್ದಿದ್ದಾರೆ.
ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್ ಟ್ರಯಲ್ಗೆ 12 ಸಂಸ್ಥೆಗಳ ಆಯ್ಕೆ