ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ಆಲಿಯಾ ಭಟ್ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಸಂಕಷ್ಟಕ್ಕೆ ಕಾರಣವಾಗಿದ್ದು, ಇನ್ನೇನು ಬಿಡುಗಡೆ ಆಗಲಿರುವ ಸಡಕ್ 2 ಚಿತ್ರದ ಪೋಸ್ಟರ್! ಹೌದು, ಚಿತ್ರದಲ್ಲಿ ಕೈಲಾಸ ಮಾನಸ ಸರೋವರ ಇರುವ ಫೋಟೋ ಪ್ರಕಟಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಸಿಂಕದರ್ಪುರ್ ನಿವಾಸಿ ಆಚಾರ್ಯ ಚಂದ್ರ ಕಿಶೋರ್ ಎಂಬುವವರು ದೂರು ನೀಡಿದ್ದಾರೆ.
ಇದನ್ನೂ ಓದಿ: ಹಿಂದಿ ಬೆಲ್ ಬಾಟಂಗೆ ವಾಣಿ ರಾಣಿ
ದೂರು ದಾಖಲಾಗುತ್ತಿದ್ದಂತೆ ಮುಖ್ಯ ಜಿಲ್ಲಾ ಮ್ಯಾಜೆಸ್ಟ್ರೇಟ್ ಮುಖೇಶ್ ಕುಮಾರ್ ಜುಲೈ 8ಕ್ಕೆ ವಿಚಾರಣೆಗೆ ಆಹ್ವಾನಿಸಿದ್ದಾರೆ. ಐಪಿಸಿ ಸೆಕ್ಷನ್ 295ಎ ಮತ್ತು 120ಬಿ ಪ್ರಕಾರ ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು, ಕ್ರಿಮಿನಲ್ ಆರೋಪದಡಿ ದೂರು ನೀಡಿದ್ದಾರೆ.
ಇದನ್ನೂ ಓದಿ: ರಾಗಿಣಿ ಚಂದ್ರನ್ ಲಾ… ಕುತೂಹಲ…
ಇನ್ನು ಸಿನಿಮಾ ಬಿಡುಗಡೆ ಬೆನ್ನಲ್ಲೇ ಚಿತ್ರದ ಪೋಸ್ಟರ್ಗಳು ಟ್ರೋಲ್ಗೆ ಒಳಗಾಗುತ್ತಿವೆ. ಅದ್ಯಾವ ಮಟ್ಟಿಗೆ ಎಂದರೆ, ಬೈಕಾಟ್ ಆಲಿಯಾ ಎಂದೆಲ್ಲ ಕಮೆಂಟ್ ಹಾಕಲಾಗುತ್ತಿದೆ. ‘ತುಂಬು ಹೃದಯದ ಧನ್ಯವಾದಗಳು, ಈ ವಿಚಾರವನ್ನು ಹೇಳಿಕೊಳ್ಳು ನನಗೆ ಗರ್ವ ಎನಿಸುತ್ತದೆ. ಪ್ಲಾಪ್ ಸಿರೀಸ್ಗಳ ಬಿಡುಗಡೆ ಶುರುವಾಗಲಿದೆ. ಅದರಲ್ಲಿ ಮೊದಲನೆಯದು ಸಡಕ್ 2 ಸಿನಿಮಾ ಆಗಿರಲಿದೆ’ ಎಂದರೆ, ಇನ್ನು ಕೆಲವರು, ‘ಯಾವಾಗ ಸಡಕ್ 2 ಅಟ್ಟರ್ ಪ್ಲಾಪ್ ಆಗುತ್ತದೋ, ಆವಾಗ ನಿಮಗೆ ಅರ್ಥವಾಗುತ್ತದೆ ಇದೇ ನಿಜವಾದ ಮುಕ್ತಾಯ ಎಂದು. ಜಸ್ಟಿಸ್ ಪಾರ್ ಸುಶಾಂತ್ ಡೆತ್’ ಎಂದು ಬರೆದುಕೊಂಡಿದ್ದಾರೆ. ‘ಬೈಕಾಟ್ ಸಡಕ್, ಬೈಕಾಟ್ ಆಲಿಯಾ ಬೈಕಾಟ್ ಮಹೇಶ್ ಭಟ್‘ ಎಂದೆಲ್ಲ ಕಮೆಂಟ್ ಮಾಡಿ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ.
1991ರಲ್ಲಿ ತೆರೆಕಂಡಿದ್ದ ಸಡಕ್ ಚಿತ್ರದ ಸೀಕ್ವೆಲ್ ಇದಾಗಿದ್ದು, ಮುಖೇಶ್ ಭಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆಲಿಯಾ ಭಟ್, ಪೂಜಾ ಭಟ್, ಸಂಜಯ್ ದತ್ ಮುಖ್ಯ ತಾರಾಗಣದಲ್ಲಿದ್ದಾರೆ. (ಏಜೆನ್ಸೀಸ್)