ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ದೀಪಾವಳಿ ಹಬ್ಬದ ನಿಮಿತ್ತ ರಾಮ್ಸೇತು ಸಿನಿಮಾ ಘೋಷಣೆ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಬಿಡುಗಡೆ ಮಾಡಿಕೊಂಡು, ಒಂದಷ್ಟು ಪರ ವಿರೋಧ ಚರ್ಚೆಗೂ ಕಾರಣರಾಗಿದ್ದರು. ಅದಾದ ಬಳಿಕ ಸಿನಿಮಾದ ಶೂಟಿಂಗ್ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿಯಾಗಿ ಬಂದಿದ್ದರು. ಇದೀಗ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿಕೊಂಡಿದೆ.
ಇದನ್ನೂ ಓದಿ: ರಾವಣನ ಬಗ್ಗೆ ಮಾತನಾಡಿದ್ದಕ್ಕೆ ಸೈಫ್ ಮೇಲೆ ಕೇಸ್!
ಹೌದು, 2022ರ ದೀಪಾವಳಿಗೆ ರಾಮ್ಸೇತು ಸಿನಿಮಾ ಬಿಡುಗಡೆ ಆಗಲಿದೆ. 2021ರ ಮಧ್ಯೆ ಭಾಗದಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಮುಂಬೈಗೆ ಭೇಟಿ ನೀಡಿದ್ದರು. ಆ ವೇಳೆ ಅಕ್ಷಯ್ ಕುಮಾರ್, ಅಯೋಧ್ಯೆಯಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೋರಿದ್ದರು. ಅವರಿಂದ ಒಪ್ಪಿಗೆ ಪಡೆದು, ಒಂದಷ್ಟು ಸೆಟ್ ಹಾಕುವುದಕ್ಕೂ ಚಿತ್ರತಂಡ ತಯಾರಿ ನಡೆಸಿದೆ.
ಇದನ್ನೂ ಓದಿ: ಕನ್ನಡದ ಸಾಧಕನ ಬಯೋಪಿಕ್, ‘ದಿ ಬ್ರಿಡ್ಜ್ ಮ್ಯಾನ್’
ಇದೀಗ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಅಕ್ಷಯ್, ಬೆಲ್ಬಾಟಂ ಸಿನಿಮಾ ಮುಗಿಸಿದ್ದಾರೆ. ಅದರ ಜತೆಗೆ ಪೃಥ್ವಿರಾಜ್ ಚೌಹಾಣ್ ಮತ್ತು ಬಚ್ಚನ್ ಪಾಂಡೆ ಸಿನಿಮಾದ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ರಾಮ್ಸೇತು ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕೆ ಅಭಿಷೇಕ್ ಶರ್ಮಾ ನಿರ್ದೇಶನ (ಏಜೆನ್ಸೀಸ್)