ನವದೆಹಲಿ: ಶುಕ್ರವಾರ ರಾತ್ರಿ ಕೇರಳದ ಕೋಯಿಕ್ಕೋಡ್ನಲ್ಲಿ ವಿಮಾನ ದುರಂತ ಸಂಭವಿಸಿ 19 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ.
ಈ ಅಪಘಾತದ ಬೆನ್ನಲ್ಲೇ ಜಾರ್ಖಂಡದ ರಾಂಚಿಯಲ್ಲಿ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಏರ್ ಏಷ್ಯಾ ವಿಮಾನ ಐ 5-632 ರಾಂಚಿಯಿಂದ ಮುಂಬೈಗೆ ತೆರಳಬೇಕಿತ್ತು. ಆದರೆ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣದಲ್ಲಿ ಹಕ್ಕಿಯೊಂದು ಅಡ್ಡ ಬಂದು ವಿಮಾನಕ್ಕೆ ಹೊಡೆದಿದೆ. ಇದರಿಂದಾಗಿ ವಿಮಾನ ತುರ್ತು ಲ್ಯಾಂಡ್ ಆಗಿದೆ ಎಂದು ಅಲ್ಲಿನ ಏರ್ಪೋರ್ಟ್ ತಿಳಿಸಿದೆ.
180 ಸೀಟ್ನ ಈ ವಿಮಾನದಲ್ಲಿ 176 ಪ್ರಯಾಣಿಕರು ಇದ್ದರು. ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಏರ್ಪೋರ್ಟ್ ಆಡಳಿತ ತಿಳಿಸಿದೆ. (ಏಜೆನ್ಸೀಸ್)
ತಾಯಿ ಸಿಂಹವು ತನ್ನ ಮರಿಗೆ ಏನು ಹೇಳ್ತಿದೆ ಗೆಸ್ ಮಾಡಿ: ಇಲ್ಲಿದೆ ನೋಡಿ ಕುತೂಹಲಕಾರಿ ಉತ್ತರ!