More

    ಏನ್​ ಗುರಾಯಿಸೋದು! ಮೈದಾನದಲ್ಲೇ ಕ್ರಿಕೆಟಿಗರ ಕಿತ್ತಾಟ, ಶ್ರೀಶಾಂತ್ ಆರೋಪಕ್ಕೆ ಗಂಭೀರ್​ ನಗುವಿನ ಉತ್ತರ​

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ಗೌತಮ್​ ಗಂಭೀರ್​ ಮತ್ತು ಶ್ರೀಶಾಂತ್​, ಲೆಜೆಂಡ್​ ಲೀಗ್​ ಕ್ರಿಕೆಟ್​ (ಎಲ್​ಎಲ್​ಸಿ 2023) ಟೂರ್ನಿಯ ಎಲಿಮಿನೇಟರ್​ ಪಂದ್ಯದ ವೇಳೆ ಮೈದಾನದಲ್ಲೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಈ ಘಟನೆಯ ಬೆನ್ನಲ್ಲೇ ಗೌತಿ, ಶ್ರೀಶಾಂತ್​​ಗೆ ತಿರುಗೇಟು ಸಹ ನೀಡಿದ್ದಾರೆ.

    ಎಲಿಮಿನೇಟರ್​ ಪಂದ್ಯ ಬುಧವಾರ ರಾತ್ರಿ ಸೂರತ್​ನಲ್ಲಿ ನಡೆಯಿತು. ಗಂಭೀರ್​ ನೇತೃತ್ವದ ಇಂಡಿಯನ್ಸ್​ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್​ ಮಾಡಿತು. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್​ ಉತ್ತಮ ಆಟವಾಡಿದರು. ಪಂದ್ಯದ ಎರಡನೇ ಓವರ್​ ಅನ್ನು ಶ್ರೀಶಾಂತ್​ ಎಸೆದರು. ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಸಿಕ್ಸರ್​ ಮತ್ತು ಬೌಂಡರಿಯನ್ನು ಗಂಭೀರ್​ ಬಾರಿಸಿದರು. ಆದರೆ, ನಾಲ್ಕನೇ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. ಈ ವೇಳೆ ಶ್ರೀಶಾಂತ್​ ಅವರು ಗಂಭೀರ್​ಗೆ ಏನೋ ಹೇಳಿದ್ದಾರೆ ಅಥವಾ ಗುರಾಯಿಸಿರುವಂತೆ ಕಾಣುತ್ತದೆ. ಇದರಿಂದ ಆಕ್ರೋಶಗೊಂಡ ಗಂಭೀರ್​, ಏನು ಗುರಾಯಿಸ್ತಿದ್ದೀಯಾ ಎನ್ನುವಂತೆ ಶ್ರೀಶಾಂತ್​ ಕಡೆ ದಿಟ್ಟಿಸಿ ನೋಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯು ಸಹ ನಡೆಯಿತು.

    ಪಂದ್ಯದ ವಿಚಾರಕ್ಕೆ ಬಂದರೆ, ಗಂಭೀರ್ (51), ಬೆನ್ ಡಕ್ (30) ಹಾಗೂ ಭರತ್ ಚಿಪ್ಲಿ (35) ಅವರ ಅಮೋಘ ಆಟದಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಇಂಡಿಯಾ ಕ್ಯಾಪಿಟಲ್ಸ್​ ತಂಡ 223 ರನ್ ಕಲೆಹಾಕಿತು. ಕ್ಯಾಪಿಟಲ್ಸ್​ ತಂಡ ನೀಡಿದ 224 ರನ್​ಗಳ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ಕ್ರಿಸ್ ಗೇಲ್​ (84), ಓ ಬ್ರಿಯಾನ್ (57) ಅಬ್ಬರ ಬ್ಯಾಟಿಂಗ್​ ನಡುವೆಯೂ ಸೋಲುಂಡಿತು. ಹೇಗೆಂದರೆ, ಅಂತಿಮ ಓವರ್​ನಲ್ಲಿ ಗುಜರಾತ್ ತಂಡಕ್ಕೆ 20 ರನ್​ಗಳ ಅವಶ್ಯಕತೆ ಇತ್ತು. ಆದರೆ, ಕೇವಲ 8 ರನ್​ಗಳನ್ನು ಮಾತ್ರ ಕಲೆ ಹಾಕಿತು. ಹೀಗಾಗಿ ಕ್ಯಾಪಿಟಲ್ಸ್​ ತಂಡಸ ಸುಲಭ ಜಯಸಾಧಿಸಿತು.

    ತಂಡದ ಬೆನ್ನಲ್ಲೇ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಳ್ಳುವ ಮೂಲಕ ಶ್ರೀಶಾಂತ್​ಗೆ ಗಂಭೀರ್​ ಟಾಂಗ್​ ಕೊಟ್ಟಿದ್ದಾರೆ. ಕ್ರಿಕೆಟ್​ನಲ್ಲಿ ತಮ್ಮ ಆರಂಭದ ದಿನದ ಫೋಟೋವೊಂದನ್ನು ಗೌತಿ ಪೋಸ್ಟ್​ ಮಾಡಿದ್ದಾರೆ. ಫೋಟೋದಲ್ಲಿ ಗಂಭೀರ್​ ನಗುತ್ತಿದ್ದು, ಜಗತ್ತು ಗಮನ ಹರಿಸುತ್ತಿರುವಾದ ನಗುತ್ತಿರು ಎಂದು ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಶ್ರೀಶಾಂತ್ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಪರಿಸ್ಥಿತಿಯನ್ನು ನಿಭಾಯಿಸಲು ಇದು ಗಂಭೀರ್ ಅವರ ಸಲಹೆಯಾಗಿದೆ ಎಂದು ಹೇಳಲಾಗಿದೆ.

    ಶ್ರೀಶಾಂತ್​ ಸಹ ಗಂಭೀರ್​ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಗಂಭೀರ್​ ಅವರೇ ನನ್ನನ್ನು ಕೆಣಕಿದರು. ನನ್ನನ್ನು ಯಾವಾಗಲೂ ಫಿಕ್ಸರ್​ ಎಂದು ಕರೆಯುತ್ತಲೇ ಇದ್ದರು. ಅವರ ಪ್ರವೃತ್ತಿಯೇ ಹೀಗೆ. ಯಾವಾಗಲೂ ಸಹ ಆಟಗಾರರೊಂದಿಗೆ ಜಗಳವಾಡುತ್ತಾರೆ. ಹಿರಿಯ ಆಟಗಾರರನ್ನೂ ಗಂಭೀರ್​ ಗೌರವಿಸುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಡಂಕಿ ಸಿನಿಮಾದ ಹೆಸರು ಕೇಳಲು ವಿಚಿತ್ರ ಎನಿಸಿದ್ರೂ ಇದರ ಹಿಂದಿದೆ ರೋಚಕ ಕಹಾನಿ! ಏನಿದು ಡಾಂಕಿ ಫ್ಲೈಟ್?​

    150 ಗ್ರಾಂ ಚಿನ್ನ, 15 ಎಕರೆ ಭೂಮಿ, BMW ಬೇಡಿಕೆಯಿಂದ ಮದುವೆ ರದ್ದು; “ಎಲ್ಲರಿಗೂ ಹಣ ಬೇಕು” ಎಂದು ಬರೆದು ವೈದ್ಯ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts