More

    ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್​ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ

    ಸುಶಾಂತ್​ ಸಿಂಗ್​ ಸಾವಿಗೆ ಪರೋಕ್ಷವಾಗಿ ಕಾರಣರಾದ ಕರಣ್​ ಜೋಹರ್​ ಅವರು ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ವಾಪಸ್ಸು ಕೊಡಬೇಕು ಎಂದು ಇತ್ತೀಚೆಗಷ್ಟೇ ಕಂಗನಾ ರಣಾವತ್​ ಹೇಳಿದ್ದರು. ಇದೀಗ ಅವರ ಮಾತುಗಳು ಸುಳ್ಳಾಗಿರುವುದರಿಂದ, ಆಕೆ ತನಗೆ ಸಿಕ್ಕ ಪ್ರಶಸ್ತಿಯನ್ನು ವಾಪಸ್ಸು ಕೊಡಬೇಕು ಎಂದು ಹಿರಿಯ ನಟ ಆದಿತ್ಯ ಪಂಚೋಲಿ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ …

    ಆದಿತ್ಯ ಪಂಚೋಲಿ ಮತ್ತು ಕಂಗನಾ ರಣಾವತ್​ ಇಬ್ಬರದ್ದೂ ಹಳೆಯ ಸ್ನೇಹ. ಕಂಗನಾ ಅವರನ್ನು ಬಾಲಿವುಡ್​ಗೆ ಪರಿಚಯಿಸಿದ್ದು ಇದೇ ಆದಿತ್ಯ. ಆದರೆ, ಒಂದು ಹಂತದಲ್ಲಿ ಅವರಿಬ್ಬರ ನಡುವಿನ ಸ್ನೇಹ-ಸಂಬಂಧ ಕಳಚಿ ಹೋಯಿತು. ಇಬ್ಬರೂ ಶರಂಪರ ಕಿತ್ತಾಡಿಕೊಂಡು, ಒಬ್ಬರ ಮೇಲೊಬ್ಬರು ಕೇಸ್​ ಹಾಕಿಕೊಂಡಿದ್ದಾರೆ. ಆ ಕೇಸ್​ಗಳು ಇನ್ನೂ ನ್ಯಾಯಾಲಯದಲ್ಲಿವೆ.

    ಹೀಗಿರುವಾಗಲೇ ಆದಿತ್ಯ ಪಂಚೋಲಿ, ಕಂಗನಾ ತನಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್​ ಸಿಂಗ್​ ಆತ್ಮಹತ್ಯೆ ನಂತರ ಬಾಲಿವುಡ್​ನಲ್ಲಿ ಕಂಗನಾ ದೊಡ್ಡ ಮಟ್ಟಿಗೆ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಶುರುಮಾಡಿದರು. ಅಷ್ಟೇ ಅಲ್ಲ, ಇದೇ ವಿಷಯವಾಗಿ ಅವರು ಹಲವರ ಕಾಲೆಳೆದರು.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಆದಿತ್ಯ, ‘ಒಬ್ಬರ ಮೂರ್ಖತನದಿಂದ ಎಷ್ಟೆಲ್ಲಾ ಜನ ತಲೆ ತಗ್ಗಿಸಬೇಕಾಯಿತು. ಇದು ನ್ಯಾಯವಲ್ಲ. ಎಲ್ಲರೂ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬೇಕು. ಸುಶಾಂತ್​ ಅವರ ಮ್ಯಾನೇಜರ್​ ದಿಶಾ ಸಾಲಿಯಾನ್​ ಸಾವಿಗೆ ನನ್ನ ಮಗ ಕಾರಣ ಎಂದು ಹೇಳಲಾಯಿತು. ನಾನು ಸೋಷಿಯಲ್​ ಮೀಡಿಯಾದಲ್ಲಿ ಇಲ್ಲ. ಆದರೆ, ಸೂರಜ್​ನನ್ನು ಕೊಲೆಗಾರರಾಗಿ ಬಿಂಬಿಸಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್ ಸಹೋದರ ನಿಧನ

    ‘ಕಂಗನಾ ಅವರ ನೆಪೋಟಿಸಂ ಥಿಯರಿ ಇದೀಗ ಸುಳ್ಳಾಗಿದೆ. ತನ್ನ ಮಾತು ಸುಳ್ಳಾದರೆ, ಪದ್ಮಶ್ರೀ ಪ್ರಶಸ್ತಿ ವಾಪಸ್ಸು ಕೊಡುತ್ತೀನಿ ಎಂದು ಹೇಳಿದ್ದಳು. ಇದೀಗ ಕೊಡಲಿ ನೋಡೋಣ. ಸ್ವತಃ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಅವರೇ ಎಲ್ಲೂ ನೆಪೋಟಿಸಂ ವಿಷಯವಾಗಿ ಮಾತನಾಡಿಲ್ಲ. ಬಹಳ ಸ್ಪಷ್ಟವಾಗಿ ಅವರು ರಿಯಾ ಮೇಲೆ ಸೆಕ್ಷನ್​ 306 ಕೇಸ್​ ದಾಖಲಿಸಿದ್ದಾರೆ. ಹೀಗಿರುವಾಗ ಕಂಗನಾ ಮಾತ್ರ ಎಲ್ಲರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ಆದಿತ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ‘ಪಾರ್ವತಿ’ಯನ್ನು ದತ್ತು ಪಡೆದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts