ನವದೆಹಲಿ : ಟೋಕಿಯೋದಲ್ಲಿ ಪದಕ ಗೆಲ್ಲದಿದ್ದರೂ 200ಕ್ಕೂ ಹೆಚ್ಚು ದೇಶಗಳ ಆಟಗಾರರ ವಿರುದ್ಧ ಸೆಣೆಸಿ, ನಾಲ್ಕನೇ ಸ್ಥಾನ ಗಳಿಸಿರುವ ಭಾರತದ ಗಾಲ್ಫರ್ ಅದಿತಿ ಅಶೋಕ್ ಎಲ್ಲರ ಗಮನ ಸೆಳೆದಿದ್ದಾರೆ. ಒಲಿಂಪಿಕ್ಸ್ನಲ್ಲಿ ಭಾರತದ ಪರವಾಗಿ ಗಾಲ್ಫ್ನಲ್ಲಿ ಇದುವರೆಗಿನ ಅತ್ಯುತ್ತಮ ಆಟಗಾರಿಕೆ ಪ್ರದರ್ಶಿಸಿರುವ ಅದಿತಿಗೆ, ದಿವಂಗತ ಮಿಲ್ಕಾ ಸಿಂಗ್ರ ಪುತ್ರ ಹಾಗೂ ದೇಶದ ಹಿರಿಯ ಗಾಲ್ಫರ್ ಆಗಿರುವ ಜೀವ್ ಮಿಲ್ಕಾ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
“ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಅದಿತಿ ಅಶೋಕ್ ಇತಿಹಾಸ ರಚಿಸಿದ್ದಾರೆ. ಗಾಲ್ಫ್ಅನ್ನು ಒಲಿಂಪಿಕ್ಸ್ನಲ್ಲಿ 2016 ರಲ್ಲಿ ಸೇರಿಸಲಾಯಿತು. ಅದಿತಿ ಇದೀಗ ಯುವಜನರಿಗೆ ಹೊಸ ಭರವಸೆ ಹುಟ್ಟಿಸಿದ್ದಾರೆ. ಇದು ಭಾರತದಲ್ಲಿ ಗಾಲ್ಫ್ ಕ್ರೀಡೆಯಾಗಿ ಬೆಳೆಯಲು ಒಳ್ಳೆಯ ಉತ್ತೇಜನ ನೀಡಲಿದೆ” ಎಂದಿದ್ದಾರೆ. “ಅದಿತಿಯ ತಂದೆತಾಯಿ ಅವಳಿಗೆ ಸಹಾಯ ಮಾಡಿದ್ದಾರೆ. ಈಗ ಆಕೆ ಏನೆಲ್ಲ ಮತ್ತು ಎಲ್ಲವೂ ಸಾಧ್ಯ ಎಂದು ತೋರಿಸಿದ್ದಾಳೆ. ಅದಿತಿ ಸಾಧಿಸಿರುವುದರ ಬಗ್ಗೆ ನಮಗೆ ಹೆಮ್ಮೆ ಇದೆ, ಬೇಸರಪಡುವ ಅಗತ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಗಾಲ್ಫ್ನಲ್ಲಿ ಪದಕ ಜಸ್ಟ್ ಮಿಸ್! ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್
ಗಾಲ್ಫ್ ಆಟವು ಶ್ರೀಮಂತರು ಸಮಯ ಕಳೆಯಲು ಆಡುವ ಆಟದಂತೆಯೇ ಬಿಂಬಿತವಾಗಿದ್ದು, ಬೇರೆ ಕ್ರೀಡೆಗಳಂತೆ ಈ ಆಟವನ್ನು ಆಯ್ದುಕೊಳ್ಳುವ ಜನರು ಕಡಿಮೆ. ಇದೀಗ ಒಲಿಂಪಿಕ್ಸ್ನಲ್ಲಿ ಭಾರತದ ಯುವತಿಯು ರೋಮಾಂಚಕ ಪ್ರದರ್ಶನ ನೀಡಿರುವುದು ಕ್ರೀಡಾರ್ಥಿಗಳ ಆಸಕ್ತಿಯನ್ನು ಅದರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
“ನಮ್ಮ ದೇಶದಲ್ಲಿ ಗಾಲ್ಫ್ಗಾಗಿ ಹೆಚ್ಚು ಸಾರ್ವಜನಿಕ ಡ್ರೈವಿಂಗ್ ರೇಂಜ್ಗಳಿರಬೇಕೆಂದು ನಾನು ಸರ್ಕಾರವನ್ನು ಕೇಳುತ್ತಾ ಬಂದಿದ್ದೇನೆ. ಎಲ್ಲರಿಗೂ ಗಾಲ್ಫ್ ಆಟವನ್ನು ಪ್ರಯತ್ನಿಸುವುದಕ್ಕೆ ಅವಕಾಶ ಸಿಗಬೇಕು. ಸಾರ್ವಜನಿಕರಿಗೆ ತೆರೆಯಲಾಗುವ ರೇಂಜ್ಗಳಲ್ಲಿ ಮಕ್ಕಳು ಅವರ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಗಾಲ್ಫ್ ಕೋರ್ಸ್ಗಳಲ್ಲಿ ಭಾಗವಹಿಸಿ ಅವರ ಆಸಕ್ತಿಯಲ್ಲಿ ತೊಡಗಿಕೊಳ್ಳಬಹುದು” ಎಂದು ಜೀವ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)
ಒಲಿಂಪಿಕ್ಸ್: ಕುಸ್ತಿಯಲ್ಲಿ ಕಂಚಿಗಾಗಿ ಕಾದಾಟ, ಜಾವಲಿನ್ ಥ್ರೋನಲ್ಲಿ ಚಿನ್ನದಾಸೆ
ಬಿಜೆಪಿ, ಸರ್ಕಾರಕ್ಕೆ ಮಠಾಧೀಶರಿಂದ ಮೂರು ಬೇಡಿಕೆ! ಸಿಎಂ ಬೊಮ್ಮಾಯಿಗೆ ಶುಭ ಹಾರೈಕೆ