More

    ಆದಿಪುರುಷ್​​ಗೆ ಮತ್ತೊಂದು ಕಂಟಕ … ಮತ್ತೆ ಚಿತ್ರೀಕರಣ ಪೋಸ್ಟ್​​ಪೋನ್​

    ಹೈದರಾಬಾದ್​: ಪ್ರಭಾಸ್​ ಅಭಿನಯದ ಆದಿಪುರುಷ್​ ಚಿತ್ರಕ್ಕೆ ಒಂದಲ್ಲ ಒಂದು ಕಂಟಕ ಎದುರಾಗುತ್ತಲೇ ಇದೆ. ಮೊದಲಿಗೆ ಮುಂಬೈನಲ್ಲಿ ಸೆಟ್​ ನಿರ್ಮಿಸಿ ಚಿತ್ರೀಕರಣ ಪ್ರಾರಂಭಿಸಲಾಗಿತ್ತು. ಆದರೆ, ಆ ಸೆಟ್​ಗೆ ಬೆಂಕಿ ಬಿದ್ದು, ಚಿತ್ರೀಕರಣ ಸ್ಥಗಿತಗೊಂಡಿತ್ತು. ಆ ನಂತರ ಸೆಟ್​ಗಳನ್ನು ಪುನರ್​ನಿರ್ಮಿಸಿ ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಘೋಷಣೆಯಾಯಿತು. ಸದ್ಯದಲ್ಲೇ ಹೈದರಾಬಾದ್​ನಲ್ಲಿ ಚಿತ್ರೀಕರಣ ಮುಂದುವರೆಸಬೇಕು ಎನ್ನುವಷ್ಟರಲ್ಲೇ ಇನ್ನೊಂದು ಕಂಟಕ ಎದುರಾಗಿದ್ದು, ಚಿತ್ರೀಕರಣ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ನಾನು ಸತ್ತಿಲ್ಲ ಬದುಕಿದ್ದೇನೆ … ಸುಳ್ಳು ಸದ್ದಿ ಹಬ್ಬಿಸಬೇಡಿ ಎಂದ ಶಕ್ತಿಮಾನ್

    ಹೌದು, ಆದಿಪುರುಷ್​ ಚಿತ್ರದ ಚಿತ್ರೀಕರಣ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಲಾಕ್​ಡೌನ್​. ತೆಲಂಗಾಣದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಹಲವು ಚಿತ್ರತಂಡಗಳು ಹೈದರಾಬಾದ್​ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಮುಂದಾಗಿದ್ದವು. ರಜನಿಕಾಂತ್​ ಅಭಿನಯದ ಅಣ್ಣಾತ್ತೆ ಚಿತ್ರತಂಡದವರು, ಕಳೆದ ಒಂದು ತಿಂಗಳಿನಿಂದ ಹೈದರಾಬಾದ್​ನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಮಿಕ್ಕಂತೆ ಬೇರೆ ಚಿತ್ರಗಳ ಚಿತ್ರೀಕರಣ ಸಹ ಹೈದರಾಬಾದ್​ನಲ್ಲಿ ನಡೆಯುತ್ತಿತ್ತು.

    ಅದೇ ಕಾರಣಕ್ಕೆ  ಆದರೆ, ಕ್ರಮೇಣ ಕರೊನಾ ಕೇಸ್​ಗಳಲ್ಲಿ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಘೋಷಿಸಿದ್ದಾರೆ. ಸದ್ಯದಲ್ಲೇ ಹೈದರಾಬಾದ್​ನಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕು ಎಂಬ ಚಿತ್ರತಂಡದ ಯೋಜನೆಗೆ ಇದರಿಂದ ಭಾರೀ ಹಿನ್ನೆಡೆಯಾಗಿದೆ.

    ಇದನ್ನೂ ಓದಿ: ಕೊಟ್ಟಿದ್ದನ್ನು ಹೇಳಲು ಸಂಕೋಚ; ನೆಟ್ಟಿಗರ ಟೀಕೆಗೆ ದಾನದ ಪಟ್ಟಿ ತೆರೆದಿಟ್ಟ ಅಮಿತಾಬ್

    ರಾಮಾಯಣವನ್ನು ಆಧರಿಸಿ ನಿರ್ಮಿಸಲಾಗುತ್ತಿರುವ ಆದಿಪುರುಷ್​ ಚಿತ್ರದಲ್ಲಿ ರಾಮನಾಗಿ ಪ್ರಭಾಸ್​ ನಟಿಸುತ್ತಿದ್ದಾರೆ. ಅವರಿಗೆ ಸೀತೆಯಾಗಿ ಬಾಲಿವುಡ್​ ನಟಿ ಕೃತಿ ಸನೋನ್​ ಅಭಿನಯಿಸುತ್ತಿದ್ದಾರೆ. ಇನ್ನು ಸೈಫ್​ ಅಲಿ ಖಾನ್​, ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾನಾಜಿ ಚಿತ್ರವನ್ನು ನಿರ್ದೇಶಿಸಿದ್ದ ಓಂರೌತ್​ ಈ ಬಹುಕೋಟಿ ವೆಚ್ಚದ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಕಾರ್ಮಿಕರ ಕಷ್ಟಕ್ಕೆ ಕಲಾವಿದರ ಸ್ಪಂದನೆ; ಹೀಗೊಂದು ವಿಭಿನ್ನ ನಿಧಿ ಸಂಗ್ರಹಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts