More

    ತೆಲುಗು ಸೂಪರ್​ಸ್ಟಾರ್​ ಚಿರಂಜೀವಿ ಸಿನಿಮಾ ಧಿಕ್ಕರಿಸಿ ನಟಿ ತ್ರಿಶಾ ಚಿತ್ರತಂಡದಿಂದ ಹೊರನಡೆದಿದ್ದೇಕೆ?

    ಹೈದರಾಬಾದ್​: ತೆಲುಗು ಸೂಪರ್​ಸ್ಟಾರ್​ ಚಿರಂಜೀವಿ ಜತೆ ಬಹುಭಾಷಾ ನಟಿ ತ್ರಿಶಾ ಕೃಷ್ಣನ್​ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಖಷಿಯಲ್ಲಿದ್ದ ಅಭಿಮಾನಿಗಳಿಗೆ ಸ್ವತಃ ತ್ರಿಶಾ ಅವರೇ ಶಾಕ್​ ನೀಡಿದ್ದಾರೆ. ಚಿರಂಜೀವಿ ಅಭಿನಯದ “ಆಚಾರ್ಯ” ಸಿನಿಮಾದಿಂದ ಹೊರ ನಡೆದಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಶುಕ್ರವಾರ ಟ್ವೀಟ್​ ಮಾಡಿರುವ ತ್ರಿಶಾ ಆಚಾರ್ಯ ಚಿತ್ರದಿಂದ ಹೊರನಡೆಯಲು ಕಾರಣವೇನೆಂಬುದನ್ನು ವಿವರಿಸಿದ್ದಾರೆ. ಕೆಲವು ವಿಚಾರಗಳು ಮೊದಲೇ ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುವುದು ನನ್ನ ಅರಿವಿಗೆ ಬಂದಿದೆ. ನಿರ್ಮಾಪಕರೊಂದಿಗಿನ ಕ್ರಿಯೇಟಿವ್​ ವ್ಯತ್ಯಾಸದಿಂದಾಗಿ ಚಿರಂಜೀವಿ ಸರ್​ ಸಿನಿಮಾದಿಂದ ಹೊರ ನಡೆಯುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಆದಷ್ಟು ಬೇಗ ಹೊಸ ಯೋಜನೆಯೊಂದಿಗೆ ತೆಲುಗು ಪ್ರೇಕ್ಷಕರ ಎದುರು ಬರುತ್ತೇನೆಂದು ಹೇಳಿದ್ದಾರೆ.

    2006ರಲ್ಲಿ ಬಿಡುಗಡೆಯಾದ ಎ.ಆರ್​. ಮುರುದಾಸ್​ ನಿರ್ದೇಶನದ ಸ್ಟಾಲಿನ್​ ಚಿತ್ರದಲ್ಲಿ ತ್ರಿಶಾ ಹಾಗೂ ಚಿರಂಜೀವಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ಬಳಿಕ ಆಚಾರ್ಯ ಚಿತ್ರದಿಂದ ತ್ರಿಶಾ ಮತ್ತು ಚಿರಂಜೀವಿ ಮತ್ತೆ ಒಂದಾಗುವ ಲಕ್ಷಣಗಳಿದ್ದವು. ಆದರೆ, ಇದೀಗ ತ್ರಿಶಾ ನಿರ್ಧಾರದಿಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಅಂದಹಾಗೆ ಆಚಾರ್ಯ ಸಿನಿಮಾವನ್ನು ಕೊನಿದೆಲಾ ಪ್ರೊಡಕ್ಷನ್​ ಕಂಪನಿ ಮತ್ತು ಮ್ಯಾಟಿನಿ ಎಂಟರ್ಟೈನ್​ಮೆಂಟ್​ ನಿರ್ಮಾಣ ಮಾಡುತ್ತಿದ್ದು, ಕೊರಟಾಲ ಶಿವು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮಣಿ ಶರ್ಮ ಮ್ಯೂಸಿಕ್​ ಕಂಪೋಸ್​ ಮಾಡಿದ್ದು, ಸುಮಾರು 140 ಕೋಟಿ ರೂ. ಬಿಗ್​ ಬಜೆಟ್​ ಸಿನಿಮಾ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

    ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts