ಮುಂಬೈ: ಬಾಲಿವುಡ್ನ ನಟಿ ತೇಜಸ್ವಿನಿ ಪಂಡಿತ್ ಅವರು ಪುಣೆಯಲ್ಲಿ ತಾನು ತಂಗಿದ್ದ ಅಪಾರ್ಟ್ಮೆಂಟ್ನ ಮಾಲೀಕನಿಂದ ಅನುಭವಿಸಿದ ಕಹಿ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾಧ್ಯಮದ ಎದುರು ಮಾತನಾಡಿದ್ದಾರೆ.
ಸೌಮಿತ್ರಾ ಪೋಟ್ ನಡೆಸಿಕೊಡುವ ಮಿತ್ರಮ್ಹನೇ ಪಾಡ್ಕಾಸ್ಟ್ನಲ್ಲಿ ಲೈಂಗಿಕ ಬಯಕೆ ಈಡೇರಿಸುವಂತೆ ಮಾಲೀಕ ಒಡ್ಡಿದ್ದ ಆಮಿಷದ ಬಗ್ಗೆ ಮಾತನಾಡಿದ್ದಾರೆ. ಅದು 2009-10ರ ಸಮಯ. ನಾನು ಪುಣೆಯ ಸಿನ್ಹಾಗಡ ರಸ್ತೆಯಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೆ. ಆಗ ಕೇವಲ ಎರಡು ಸಿನಿಮಾಗಳು ಮಾತ್ರ ಬಿಡುಗಡೆಯಾಗಿದ್ದವು. ಕಾರ್ಪೊರೇಟರ್ ಒಬ್ಬರು ಮನೆ ಮಾಲೀಕರಾಗಿದ್ದರು. ನಾನು ಬಾಡಿಗೆ ಪಾವತಿಸಲು ಅವರ ಕಚೇರಿಗೆ ತೆರಳಿದಾಗ ನೇರವಾಗಿಯೇ ಲೈಂಗಿಕ ಬಯಕೆ ತೀರಿಸುವಂತೆ ಕೇಳಿದ್ದರು. ನನಗೆ ಅತೀವ ಕೋಪ ಬಂದಿತು. ಟೇಬಲ್ ಮೇಲೆ ನೀರು ತುಂಬಿಟ್ಟಿದ್ದ ಗ್ಲಾಸ್ ತೆಗೆದುಕೊಂಡು ಆತನ ಮುಖಕ್ಕೆ ಎರಚಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ತೇಜಸ್ವಿನಿ, ಇಂತಹ ಕೆಲಸ ಮಾಡುವುದಕ್ಕೆ ನಾನು ಈ ವೃತ್ತಿಗೆ ಬಂದಿಲ್ಲ ಅಥವಾ ಅಂತಹ ಕೆಲಸ ಮಾಡಿದ್ದರೆ ನಾನು ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಉಳಿಯುತ್ತಿರಲಿಲ್ಲ. ಬದಲಾಗಿ ನಾನು ಮನೆಗಳು ಮತ್ತು ಕಾರುಗಳನ್ನು ಖರೀದಿಸುತ್ತಿದ್ದೆ. ನನ್ನ ವೃತ್ತಿಯ ಕಾರಣದಿಂದ ಮತ್ತು ನನ್ನ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರಿಂದ ಅಪಾರ್ಟ್ಮೆಂಟ್ ಮಾಲೀಕ ನನ್ನನ್ನು ಆ ದೃಷ್ಟಿಕೋನದಿಂದ ನಿರ್ಣಯಿಸಿದರು. ಇದು ಜೀವನದಲ್ಲಿ ನನಗೊಂದು ಪಾಠವಾಗಿದೆ ಎಂದು ತಿಳಿಸಿದ್ದಾರೆ.
2004ರಲ್ಲಿ ಕೇದಾರ್ ಶಿಂಧೆಯವರ ಅಗಾ ಬಾಯಿ ಅರೇಚಾ ಸಿನಿಮಾದಿಂದ ಚೊಚ್ಚಲ ಪ್ರವೇಶ ಮಾಡಿದ ತೇಜಸ್ವಿನಿ, ನಟಿ ಜ್ಯೋತಿ ಚಾಂಡೇಕರ್ ಅವರ ಮಗಳು. (ಏಜೆನ್ಸೀಸ್)
ಉದ್ರೇಕಕಾರಿ ಫೋಟೋ, ವಿಡಿಯೋ ಮೂಲಕ ಯುವಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಲೇಡಿಯ ಕರಾಳ ಕತೆಯಿದು!
ಕ್ಯಾಪಿಟಲ್ ಗಲಭೆ ಪ್ರಕರಣ: ಟ್ರಂಪ್ ವಿರುದ್ಧ ಕಿಮಿನಲ್ ಪ್ರಕರಣಕ್ಕೆ ಶಿಫಾರಸು, ಮಾಜಿ ಅಧ್ಯಕ್ಷರ ಅಕ್ರೋಶ
ಓದಿದ್ದು 8ನೇ ತರಗತಿ ಆದ್ರೆ ವೈದ್ಯೆಯನ್ನೇ ಪಟಾಯಿಸಿದ ಈತನ ಹಿಸ್ಟರಿ ನೋಡಿ ದಂಗಾದ ಪೊಲೀಸರು!