ಬೆಂಗಳೂರು :ಲಾಕ್ಡೌನ್ ಹಿನ್ನೆಲೆಯಲ್ಲಿ ಪೊಲೀಸರು ನೀಡಿದ ಪಾಸ್ ದುರ್ಬಳಕೆ ಮಾಡಿ ನಡುರಾತ್ರಿಯಲ್ಲಿ ಜಾಲಿ ರೈಡ್ ನಡೆಸಿ ಅಪಘಾತಕ್ಕೆ ಕಾರಣವಾದ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಅವರ ಜತೆ ಇದ್ದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ವಕೀಲರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಹಿಳಾ ವಕೀಲರಾದ ಗೀತಾ ಮಿಶ್ರಾ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣ ಗಂಭೀರವಾಗಿದ್ದು ತನಿಖೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಶುಕ್ರವಾರ ಮಧ್ಯ ರಾತ್ರಿಯಲ್ಲಿ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಲೋಕೇಶ್ ಎಂಬುವವರು ಪಾರ್ಟಿ ಮುಗಿಸಿ ತೆರಳುತ್ತಿದ್ದಾಗ ವಸಂತ ನಗರದಲ್ಲಿ ಅಪಘಾತ ಸಂಭವಿಸಿತ್ತು. ಕಾರಿನ ಗಾಜಿನ ಮೇಲೆ ಪೊಲೀಸರು ನೀಡಿದ್ದ ಕೋವಿಡ್-19 ಪಾಸ್ ಅಂಟಿಸಲಾಗಿತ್ತು. ನಟಿ ಜತೆ ಇದ್ದ ಲೋಕೇಶ್ ಎಂಬುವವರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರಿಂದ ಪಾಸ್ ದೊರೆತಿರಬಹುದು. ಪೊಲೀಸರು ನೀಡಿರುವ ಪಾಸ್ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಈ ಕಾಯ್ದೆಯಡಿ ದೂರು ದಾಖಲಾದರೆ ತಪ್ಪಿತಸ್ಥರನ್ನು ಎರಡು ವರ್ಷ ಜಾಮೀನು ರಹಿತವಾಗಿ ಜೈಲಿನಲ್ಲಿಡಲು ಅವಕಾಶ ಇದೆ.
ಏ. 9ರ ಶಬ್ ಇ ಬರಾತ್ ಪ್ರಾರ್ಥನೆ ರದ್ದುಗೊಳಿಸಿದ ವಕ್ಫ್ಬೋರ್ಡ್: ಮನೆಯಲ್ಲೇ ಪ್ರಾರ್ಥನೆ ಮಾಡುವಂತೆ ಸೂಚನೆ