More

    ಚಿತ್ರರಂಗದ ಕಹಿ ಅನುಭವವೇ ತಲೆಗೂದಲಿಲ್ಲದ ಆನಂದ್​ರನ್ನು ಗಂಡನಾಗಿ ಸ್ವೀಕರಿಸಲು ಕಾರಣ: ನಟಿ ಮಧುಬಾಲ

    ಚೆನ್ನೈ: ಅಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್​ ಅವರಿಗೆ ನಾಯಕಿಯಾಗಿ, ರನ್ನ ಚಿತ್ರದಲ್ಲಿ ಕಿಚ್ಚ ಸುದೀಪ್​ ಅವರ ಅತ್ತೆಯಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ಮಧುಬಾಲ, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಡುವ ಮೂಲಕ ಸುದ್ದಿಯಾಗಿದ್ದಾರೆ.

    ಕನ್ನಡದಲ್ಲಿ ಬೆರಳಣಿಕೆ ಚಿತ್ರದಲ್ಲಿ ನಟಿಸಿದರೂ ಕೂಡ ತಮ್ಮ ಅಭಿನಯ ಮತ್ತು ಸಹಜ ಸೌಂದರ್ಯದಿಂದಲೇ ಮಧುಬಾಲ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ರನ್ನ ಚಿತ್ರದಲ್ಲಿನ ಅತ್ತೆಯ ಪಾತ್ರವಂತೂ ಎಂದಿಗೂ ಮರೆಯುವಂತಿಲ್ಲ. ಕನ್ನಡಕ್ಕಿಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ನಟಿಸಿದ್ದಾರೆ. ಸಿನಿಮಾ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಆನಂದ್​ ಎಂಬುವರನ್ನು ಮದುವೆಯಾಗಿ ಜೀವನದಲ್ಲಿ ಸೆಟಲ್​ ಆದರು. ಇದೀಗ ಸಿನಿಮಾ ರಂಗಕ್ಕೆ ಕಂಬ್ಯಾಕ್​ ಮಾಡಿದ್ದು, ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ.

    ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನಟನನ್ನು ಮದುವೆಯಾಗಬೇಕೆಂದು ಬಯಸಿದ್ದೆ. ಆದರೆ, ನನಗಾದ ಕೆಲವು ಅನುಭವಗಳಿಂದ ಕಲಾವಿದರನ್ನು ಮದುವೆಯಾಗದಿರಲು ನಿರ್ಧರಿಸಿದೆ. ಇಂದು ಒಬ್ಬಳು, ನಾಳೆ ಇನ್ನೊಬ್ಬಳು ಮತ್ತು ನಾಡಿದ್ದು ಮತ್ತೊಬ್ಬಳ ಹಿಂದೆ ಬೀಳುವ ಪ್ರವೃತ್ತಿ ಕೆಲವು ನಟರಲ್ಲಿದೆ. ನನ್ನ ಜೀವನದಲ್ಲೂ ನಾನಿದನ್ನು ಅನುಭವಿಸಿದ್ದೇನೆ. ನಾನಿದ್ದನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿಲ್ಲ ಎಂದು ಹೇಳಿದರು.

    ನನ್ನ ಗಂಡ ಆನಂದ್​ ಅವರ ಕಂಪನಿಯ ಜಾಹೀರಾತು ಶೂಟಿಂಗ್​ಗೆಂದು ತೆರಳಿದ್ದೆ. ಈ ಸಮಯದಲ್ಲೇ ನಾನು ಮೊದಲ ಬಾರಿಗೆ ಅವರನ್ನು ಭೇಟಿಯಾದೆ. ಅವರು ನನ್ನನ್ನು ಇಷ್ಟಪಟ್ಟಿದ್ದಾರೆ ಎಂಬುದು ಮೊದಲ ನೋಟದಲ್ಲೇ ನನಗೆ ತಿಳಿಯಿತು. ಅನೇಕ ಸಂದರ್ಭಗಳಲ್ಲಿ ಪ್ರೀತಿಯ ವಿಚಾರವನ್ನು ಪ್ರಸ್ತಾಪ ಮಾಡಿದರು. ಹೀಗೆ ಇಬ್ಬರ ನಡುವೆ ಪ್ರೀತಿ ಶುರುವಾಯಿತು ಎಂದು ಹೇಳಿದರು.

    ಶೋರೂಮ್​ನಲ್ಲಿ ಕಾರು ಆಯ್ಕೆ ಮಾಡಿದಂತೆ ನನ್ನನ್ನು ಆಯ್ಕೆ ಮಾಡಿದ್ದೀಯಾ ಎಂದು ಆಗಾಗ ಗಂಡನ ಜತೆ ಆಗಳ ಆಡುತ್ತಿರುತ್ತೇನೆ. ಪ್ರತಿ ಜಗಳದಲ್ಲಿ ನಾನು ಎಲ್ಲೆ ಮೀರಿದರೆ, ಆತನೇ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡು ನನ್ನೆದರು ಸೋಲುತ್ತಾನೆ. ಅವನು ನನ್ನಂತೆಯೇ ಇದ್ದಾನೆ. ಒಂದು ಘಟನೆಯಲ್ಲಿ ಅವರು ತಮ್ಮ ಕೂದಲನ್ನು ಕಳೆದುಕೊಂಡರು. ಅವನ ಆತ್ಮವಿಶ್ವಾಸ ಕಡಿಮೆಯಾಯಿತು. ನನ್ನ ಬಳಿ ಬಂದು ಪ್ರೇಮ ನಿವೇದನೆ ಮಾಡುವಾಗ ಆತ ದಯನೀಯ ಮನೋಭಾವವನ್ನು ಹೊಂದಿದ್ದನು. ಆದರೆ, ಸುಂದರವಾಗಿರುವ ಪುರುಷರು ಏನು ಮಾಡುತ್ತಾರೆಂದು ನಾನು ಮೊದಲೇ ನೋಡಿದ್ದೇನೆ. ಹಾಗಾಗಿ ಆನಂದ ಅವರನ್ನು ಒಪ್ಪಿಕೊಂಡೆ. ಕೂದಲು ಇಲ್ಲದಿರುವುದು ಒಂದೇ ಸಮಸ್ಯೆಯೇ ಅಲ್ಲ. ಬಾಹ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎಂದು ಹೇಳಿದರು. (ಏಜೆನ್ಸೀಸ್​)

    ಫೋಟೋಗಳಲ್ಲಿ ವಿವಸ್ತ್ರಗೊಳಿಸುವ ಅಪ್ಲಿಕೇಶನ್​ಗಳಿಗೆ ಡಿಮ್ಯಾಂಡು; ಒಂದೇ ತಿಂಗಳಲ್ಲಿ 2.4 ಕೋಟಿ ಜನರಿಂದ ಹುಡುಕಾಟ

    ಮಣ್ಣಲ್ಲಿ ಮಣ್ಣಾದ ಚಂದನವನದ ಲೀಲಮ್ಮ: ಕಲಾದೇವಿಗೆ ಕನ್ನಡ ಚಿತ್ರರಂಗದಿಂದ ಭಾವುಕ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts