ಬೆಂಗಳೂರು: ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಸ್ಪರ್ಧಿಸಿರುವ ಅಂಧ ಗಾಯಕಿ ಸಹೋದರಿಯರಿಗೆ ನಟ ಜಗ್ಗೇಶ್ ನೆರವು ನೀಡಲು ಮುಂದೆ ಬಂದಿದ್ದಾರೆ.
ಮಧುಗಿರಿ ಮೂಲದ ರತ್ನಮ್ಮ ಹಾಗೂ ಮಂಜಮ್ಮ ಸಹೋದರಿಯರು ಸಣ್ಣ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮನೆ ಕಟ್ಟಿಕೊಡುವುದಾಗಿ ನಟ ಜಗ್ಗೇಶ್ ಇನ್ಸ್ಟಾಗ್ರಾಮ್ನಲ್ಲಿ ಭರವಸೆ ನೀಡಿದ್ದಾರೆ.
ಅಪ್ಪ, ಅಮ್ಮ ಹಾಗೂ ಸಹೋದರನನ್ನು ಕಳೆದುಕೊಂಡ ಅಂಧ ಸಹೋದರಿಯರು ಅಜ್ಜಿಯೊಂದಿಗೆ ವಾಸ ಮಾಡುತ್ತಿದ್ದಾರೆ. ಮಧುಗಿರಿ ದೇವಾಲಯದಲ್ಲಿ ಹಾಡು ಹೇಳಿ ಬಂದ ಹಣದಿಂದ ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ಇವರ ಅಸಹಾಯಕತೆ ನೋಡಿದ ನಟ ಜಗ್ಗೇಶ್ ಸಹೋದರಿಯರ ನೆರವಿಗೆ ಧಾವಿಸಿದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅಂಧ ಸಹೋದರಿಯರ ಕುಟುಂಬಕ್ಕೆ ಪ್ರತಿ ತಿಂಗಳು ಪಡಿತರ ನೀಡುವುದಾಗಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)