ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಫಾರ್ಮ್ ಹೌಸ್ನಲ್ಲಿ ಬಗೆಬಗೆಯ ಪ್ರಾಣಿಗಳನ್ನು ಸಾಕಿರುವ ದರ್ಶನ್, ಮೈಸೂರು ಮೃಗಾಲಯದಲ್ಲಿನ ಒಂದಷ್ಟು ಪ್ರಾಣಿಗಳನ್ನೂ ದತ್ತು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟ, ಶಿವಮೊಗ್ಗ ಸೇರಿ ಹಲವು ಅರಣ್ಯ ಪ್ರದೇಶಗಳಿಗೂ ದರ್ಶನ್ ಭೇಟಿ ಕೊಟ್ಟಿದ್ದರು. ಇದೀಗ ಶುಕ್ರವಾರ ಧಾರವಾಡಕ್ಕೆ ತೆರಳಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿಗೆ ಭೇಟಿ ನೀಡಿ, ಎತ್ತಿನ ಬಂಡಿ ಓಡಿಸಿದ್ದಾರೆ. ಅಷ್ಟೇ ಅಲ್ಲ ಡೈರಿಯಲ್ಲಿನ ವಿವಿಧ ತಳಿಯ ಜಾನುವಾರುಗಳನ್ನು ವೀಕ್ಷಣೆ ಮಾಡಿದ್ದಾರೆ. ಈ ಮೊದಲು ಹಲವು ಬಾರಿ ವಿನಯ್ ಕುಲಕರ್ಣಿ ಅವರ ಫಾರ್ಮ್ ಹೌಸ್ಗೆ ಸಾಕಷ್ಟು ಸಲ ದರ್ಶನ್ ಭೇಟಿ ನೀಡಿದ್ದರು. ಇದೀಗ ಕರೊನಾ ನಡುವೆಯೂ ಸುತ್ತಾಟ ಆರಂಭಿಸಿರುವ ಅವರು, ಧಾರವಾಡದಲ್ಲಿ ಬೀಡು ಬಿಟ್ಟಿದ್ದಾರೆ. ಚಕ್ಕಡಿ ಓಡಿಸಿದ ಫೋಟೋಗಳು ವಿಜಯವಾಣಿಗೆ ಲಭ್ಯವಾಗಿವೆ.