ಹೈದರಾಬಾದ್: ಕ್ಷಣ ಕ್ಷಣ, ಗನ್ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್ ಪಾತ್ರಗಳಿಂದಲೂ ಕಿರಣ್ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್ ಕೈತಪ್ಪಿ ಹೋದವು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ ತನ್ನ ಸಿನಿಮಾ ಜೀವನದಲ್ಲಿ ಮಾಡಿದಂತಹ ಅತಿದೊಡ್ಡ ತಪ್ಪೊಂದನ್ನು ನಟಿ ಶಕೀಲಾ ಜತೆ ನಡೆದ ಯೂಟ್ಯೂಬ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಯಾವುದು ಆ ತಪ್ಪು ಅಂದರೆ, ಈ ಒಂದು ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ಮಿಸ್ಟೇಕ್ ಎಂದಿದ್ದಾರೆ. ಹಾಗಾದ್ರೆ, ಆ ಸಿನಿಮಾ ಯಾವುದು? ನಿರ್ದೇಶಕ ಯಾರು? ಆ ಸಿನಿಮಾದಿಂದ ಅಂಥದ್ದೇನಾಯಿತು ಎಂಬುದನ್ನು ಸ್ವತಃ ಕಿರಣ್ ಅವರೇ ಹೇಳಿದ್ದಾರೆ.
2015ರಲ್ಲಿ ಬಿಡುಗಡೆಯಾದ ಅಂಬಾಲ ಹೆಸರಿನ ಸಿನಿಮಾವನ್ನು ಖುಷ್ಬೂ ಪತಿ ಸಿ. ಸುಂದರ್ ನಿರ್ದೇಶನ ಮಾಡಿದರು. ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ಮಿಸ್ಟೇಕ್ ಎಂದಿದ್ದಾರೆ ಕಿರಣ್. ಅಂಬಾಲ ಸಿನಿಮಾದಲ್ಲಿ ಕಿರಣ್ ಸೈಡ್ ರೋಲ್ ಮಾಡಿದ್ದರು. ಸುಂದರ್ ಸಿ ನನ್ನ ಕುಟುಂಬದವರಂತೆ. ನಿಮ್ಮ ಚಿತ್ರದಲ್ಲಿ ನಟಿಸಬೇಕೆಂದು ನಾನೇ ಕೇಳಿದ್ದೆ. ಅದೇ ರೀತಿ ಅಂಬಾಲ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಾನು ಸೆಟ್ ಪ್ರಾಪರ್ಟಿ ಇದ್ದಂತೆ ಅನಿಸಿತು. ಹೀಗಾಗಿ ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ತಪ್ಪು ಎಂದು ಕಿರಣ್ ಹೇಳಿದ್ದಾರೆ.
ಅಂದಹಾಗೆ 41 ವರ್ಷದ ಕಿರಣ್ ಈಗೀಗ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹೊರತುಪಡಿಸಿ ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಕಿರಣ್ ಅವರು ಇನ್ಸ್ಟಾಗ್ರಾಂಗೆ ಸೀಮಿತವಾಗದೆ, ಆ್ಯಪ್ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್ ಮತ್ತು ವೆಬ್ಸೈಟ್ ತೆರೆದಿದ್ದಾರೆ. ಮೊಬೈಲ್ನಲ್ಲಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್ ಅವರು ಗ್ಲಾಮರಸ್ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್ ಅವತಾರವನ್ನು ಕಿರಣ್ ರಾಥೋಡ್ ಅನಾವರಣಗೊಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳು ಸಣ್ಣ ಝಲಕ್ ಅನ್ನು ಕಿರಣ್ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್ ಅವತಾರಕ್ಕಾಗಿ ಆ್ಯಪ್ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ
ಮಳೆಯಲ್ಲಿ ಸಾಂಗ್ ಶೂಟಿಂಗ್ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!
ರಶ್ಮಿಕಾ ಮದ್ವೆಯಾಗೋ ಹುಡ್ಗ VD ರೀತಿ ಇರಬೇಕಂತೆ! ವಿಡಿ ಅಂದ್ರೆ ವಿಜಯ್ ದೇವರಕೊಂಡ ಅಲ್ಲ, ಮತ್ಯಾರು?