More

    ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು! ನಟಿ ಕಿರಣ್​ ರಾಥೋಡ್ ಪಶ್ಚಾತಾಪ

    ಹೈದರಾಬಾದ್​: ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್​ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್​ ಕೈತಪ್ಪಿ ಹೋದವು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

    ತಾಜಾ ಸಂಗತಿ ಏನೆಂದರೆ ತನ್ನ ಸಿನಿಮಾ ಜೀವನದಲ್ಲಿ ಮಾಡಿದಂತಹ ಅತಿದೊಡ್ಡ ತಪ್ಪೊಂದನ್ನು ನಟಿ ಶಕೀಲಾ ಜತೆ ನಡೆದ ಯೂಟ್ಯೂಬ್​ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಯಾವುದು ಆ ತಪ್ಪು ಅಂದರೆ, ಈ ಒಂದು ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ಮಿಸ್ಟೇಕ್ ಎಂದಿದ್ದಾರೆ. ಹಾಗಾದ್ರೆ, ಆ ಸಿನಿಮಾ ಯಾವುದು? ನಿರ್ದೇಶಕ ಯಾರು? ಆ ಸಿನಿಮಾದಿಂದ ಅಂಥದ್ದೇನಾಯಿತು ಎಂಬುದನ್ನು ಸ್ವತಃ ಕಿರಣ್​ ಅವರೇ ಹೇಳಿದ್ದಾರೆ.

    2015ರಲ್ಲಿ ಬಿಡುಗಡೆಯಾದ ಅಂಬಾಲ ಹೆಸರಿನ ಸಿನಿಮಾವನ್ನು ಖುಷ್ಬೂ ಪತಿ ಸಿ. ಸುಂದರ್​ ನಿರ್ದೇಶನ ಮಾಡಿದರು. ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ಮಿಸ್ಟೇಕ್​ ಎಂದಿದ್ದಾರೆ ಕಿರಣ್​. ಅಂಬಾಲ ಸಿನಿಮಾದಲ್ಲಿ ಕಿರಣ್​ ಸೈಡ್​ ರೋಲ್​ ಮಾಡಿದ್ದರು. ಸುಂದರ್ ಸಿ ನನ್ನ ಕುಟುಂಬದವರಂತೆ. ನಿಮ್ಮ ಚಿತ್ರದಲ್ಲಿ ನಟಿಸಬೇಕೆಂದು ನಾನೇ ಕೇಳಿದ್ದೆ. ಅದೇ ರೀತಿ ಅಂಬಾಲ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ನಾನು ಸೆಟ್ ಪ್ರಾಪರ್ಟಿ ಇದ್ದಂತೆ ಅನಿಸಿತು. ಹೀಗಾಗಿ ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ತಪ್ಪು ಎಂದು ಕಿರಣ್ ಹೇಳಿದ್ದಾರೆ.

    ಅಂದಹಾಗೆ 41 ವರ್ಷದ ಕಿರಣ್​ ಈಗೀಗ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹೊರತುಪಡಿಸಿ ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಕಿರಣ್​ ಅವರು ಇನ್​ಸ್ಟಾಗ್ರಾಂಗೆ ಸೀಮಿತವಾಗದೆ, ಆ್ಯಪ್​ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದಾರೆ. ಮೊಬೈಲ್​ನಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್​ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್​ ಅವತಾರವನ್ನು ಕಿರಣ್​ ರಾಥೋಡ್​ ಅನಾವರಣಗೊಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳು ಸಣ್ಣ ಝಲಕ್​ ಅನ್ನು ಕಿರಣ್​ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್​ ಅವತಾರಕ್ಕಾಗಿ ಆ್ಯಪ್​ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

    ರಶ್ಮಿಕಾ ಮದ್ವೆಯಾಗೋ ಹುಡ್ಗ VD ರೀತಿ ಇರಬೇಕಂತೆ! ವಿಡಿ ಅಂದ್ರೆ ವಿಜಯ್​ ದೇವರಕೊಂಡ ಅಲ್ಲ, ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts