ಚಾಮರಾಜನಗರ: ನ್ಯಾಯ ನಮ್ಮನ್ನು ಕಾಪಾಡುತ್ತೆ ಅನ್ನೋದು ಸುಳ್ಳಲ್ಲ. ಇಲ್ಲೊಬ್ಬ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 24 ವರ್ಷ ಪ್ರಾಯದ ಕುಂತೂರು ಮೋಳೆ ಗ್ರಾಮದ ನಿಂಗರಾಜು ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದರು.
ನಿಂಗರಾಜುರನ್ನು ವಿಚಾರಣೆಗೆಂದು ಠಾಣೆಗೆ ಪೊಲೀಸ್ ಜೀಪ್ನಲ್ಲಿ ಕರೆತರುತ್ತಿದ್ದರು. ಈ ಸಂದರ್ಭ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಪೊಲೀಸ್ ಜೀಪ್ನಲ್ಲಿ ಠಾಣೆಗೆ ಕರೆತರುತ್ತಿದ್ದಾಗ ನಿಂಗರಾಜು ಚಲಿಸುತ್ತಿದ್ದ ಜೀಪ್ನಿಂದ ನೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಜೀಪ್ನಿಂದ ಬಿದ್ದು ತೀವ್ರ ಗಾಯಗೊಂಡ ನಿಂಗರಾಜು ಚಿಕಿತ್ಸೆ ಫಲಿಸದೆ ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.