More

    ಕೊಲ್ಲಿ ಹಳ್ಳಕ್ಕೆ ಉರುಳಿದ ಇಟ್ಟಿಗೆ ಲಾರಿ: ನೆಗೆದು ಜೀವ ಉಳಿಸಿಕೊಂಡ್ರು ಐವರು

    ಅರಕಲಗೂಡು: ಕಳೆದ ವರ್ಷವಷ್ಟೆ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದಿದ್ದ ತಾಲೂಕಿನ ಬಸವನಹಳ್ಳಿ ಕೊಪ್ಪಲು ಬಳಿ ಇಟ್ಟಿಗೆ ಲಾರಿಯೊಂದು ಕೊಲ್ಲಿ ಸೇತುವೆಯಿಂದ ಹಳ್ಳಕ್ಕೆ ಉರುಳಿದ್ದು ಚಾಲಕ ಮತ್ತು ನಾಲ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹೊಳೆನರಸೀಪುರ- ಕೇರಳಾಪುರ ಕಡೆಯಿಂದ ಬಸವನಹಳ್ಳಿಗೆ ಇಟ್ಟಿಗೆಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಹಳ್ಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೊಲ್ಲಿಗೆ ಪಲ್ಟಿಯಾಗಿದೆ. ಲಾರಿ ಉರುಳುತ್ತಿದ್ದಂತೆ ಒಳಗಿದ್ದ ಐವರು ಕೆಳಕ್ಕೆ ಜಿಗಿದು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.

    ಇದನ್ನೂ ಓದಿ:  ಕುಡಿದ ಮತ್ತಿನಲ್ಲಿ ಜೀವಂತ ಹಾವನ್ನೇ ಕಚ್ಚಿ ತಿಂದ!

    ಕಳೆದ ವರ್ಷ ಬಂದೆರಗಿದ ಭೀಕರ ಕಾವೇರಿ ಪ್ರವಾಹದ ವೇಳೆ ಭಾರಿ ಮಳೆ ಹೊಡೆತಕ್ಕೆ ಸಿಕ್ಕಿ ಕೇರಳಾಪುರ- ಬಸವನಹಳ್ಳಿ ನಡುವಿನ ಕೊಲ್ಲಿ ಸೇತುವೆ ಮುರಿದು ಹಾಳಾಗಿತ್ತು. ಸೇತುವೆ ಬಿದ್ದು ತಿಂಗಳು ಕಳೆದರೂ ದುರಸ್ತಿಗೆ ಮುಂದಾಗಿರಲಿಲ್ಲ, ರಸ್ತೆಗೆ ಅಡ್ಡಲಾಗಿ ಮಣ್ಣು ಸಹ ಸುರಿದು ಅಡ್ಡಗಟ್ಟಿರಲಿಲ್ಲ.

    ಪರಿಣಾಮವಾಗಿ ಹೋದ ವರ್ಷವೇ ಸಾಲಿಗ್ರಾಮದಿಂದ ಬಸವನಹಳ್ಳಿ ಕಾಲನಿಗೆ ಪಿತೃ ಪಕ್ಷ ಹಬ್ಬದ ಊಟಕ್ಕೆ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ರಾತ್ರಿ ಸಮಯ ಮುರಿದ‌ ಕೊಲ್ಲಿ ಸೇತುಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದರು. ಈಗ ಕೊಲ್ಲಿ ಸೇತುವೆ ಹಾಳಾಗಿ ವರ್ಷ ಉರುಳಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುರಿದ ಸೇತುವೆ ದುರಸ್ತಿಗೆ ಮುಂದಾಗದ ಕಾರಣ ಹಳ್ಳಕ್ಕೆ ಲಾರಿ ಉರುಳಿದೆ.

    ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಗನ ಮೇಲೆರಗಿದ ತಾಯಿ ಮಾಡಿದ್ದೇನು?

    ನಿತ್ಯವೂ ನೂರಾರು ವಾಹನಗಳು, ಸಾರ್ವಜನಿಕರು ಓಡಾಡುವ ಮಾರ್ಗದ ದುರಸ್ತಿಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕ ರು ಆರೋಪಿಸಿದ್ದಾರೆ. ಹೊಳೆನರಸೀಪುರದ ಲಾರಿ ಕೋಲಾರದ ಮಾಲೂರಿನಿಂದ ಮನೆ ನಿರ್ಮಾಣದ ಇಟ್ಟಿಗೆಗಳನ್ನು ಹೊತ್ತುಬರುತ್ತಿತ್ತು ಎಂದು ತಿಳಿದು ಬಂದಿದೆ.

    ಎಣ್ಣೆ ಪಾರ್ಟಿಯಲ್ಲಿ ಲವ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts