More

    ಸಿಗ್ನಲ್ ಬಳಿ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆದ ಲಾರಿ: ಕಾರು ಚಾಲಕ ಸ್ಥಳದಲ್ಲೇ ಸಾವು

    ಬೆಂಗಳೂರು: ರಸ್ತೆಯಲ್ಲಿ ನಿಂತಿದ್ದ ಕಾರುಗಳಿಗೆ ಸಿಲಿಂಡರ್​ ತುಂಬಿದ ಲಾರಿ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಇಂದಿರಾನಗರದ ಭಿನ್ನಮಂಗಲ ಟ್ರಾಫಿಕ್ಸ್ ಸಿಗ್ನಲ್​ ಬಳಿ ಸೋಮವಾರ ಸಂಭವಿಸಿದೆ.

    ಅಪಘಾತದಲ್ಲಿ ಮೈಸೂರಿನ ರಾಮಚಂದ್ರ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭಿನ್ನಮಂಗಲದ ಸಿಗ್ನಲ್​ ಬಳಿ ಎರಡು ಕಾರುಗಳು ನಿಂತಿದ್ದವು. ಅವುಗಳ ಹಿಂದೆ ಸಿಲಿಂಡರ್​ ತುಂಬಿದ ಲಾರಿ ಬರುತಿತ್ತು. ರಭಸವಾಗಿ ಬಂದ ಲಾರಿ ಮುಂದೆ ನಿಂತಿದ್ದ 2 ಕಾರುಗಳಿಗೆ ಡಿಕ್ಕಿ ಹೊಡೆಯಿತು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಚಾಲಕ ರಾಮಚಂದ್ರ ಸ್ಥಳದಲ್ಲೇ ಮೃತಪಟ್ಟರು. ಮತ್ತೊಂದು ಕಾರಿನ ಏರ್​ ಬ್ಯಾಗ್​ ತೆರೆದುಕೊಂಡ ಹಿನ್ನೆಲೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಹಲಸೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

    ಅದೃಷ್ಟ ಖುಲಾಯಿಸಿ ಚಿನ್ನ ಸಿಕ್ತಲ್ಲಾ ಎಂದು ಮಾರಲು ಹೊರಟ ಚಿಂತಾಮಣಿ ಯುವಕ ಇದೀಗ ಪೊಲೀಸರ ಅತಿಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts