More

    ಬಂಟ್ವಾಳ ಉಪತಹಸೀಲ್ದಾರ್‌ ರವಿಶಂಕರ್ ಎಸಿಬಿ ಬಲೆಗೆ

    ಬಂಟ್ವಾಳ: ಲಂಚ ಸ್ವೀಕರಿಸುತ್ತಿದ್ದ ಬಂಟ್ವಾಳ ತಾಲೂಕು ಕಚೇರಿಯ ಉಪತಹಸೀಲ್ದಾರ್ ರವಿಶಂಕರ್ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ಪಜೀರು ನಿವಾಸಿ ಅರುಣ್ ರೊಡ್ರಿಗಸ್ ಅವರ ತಾಯಿ ವೆರೋನಿಕಾ ರೊಡ್ರಿಗಸ್ ಹೆಸರಿನಲ್ಲಿರುವ ಬೆಂಜನಪದವಿನ ಜಾಗದ ಆರ್‌ಟಿಸಿಯಲ್ಲಿ 107/1ಎಚ್ ಬದಲು 107/14 ಎಂದು ತಪ್ಪಾಗಿ ನಮೂದಾಗಿತ್ತು. ಇದನ್ನು ಸರಿ ಮಾಡಲು 2018ರ ಜೂ.12ರಂದು ಬಂಟ್ವಾಳ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದು, ಕ್ರಮಕ್ಕೆ 2019ರ ಮೇ 17ರಂದು ಆದೇಶಿಸಿದ್ದರು. ಪರಿಶೀಲನೆಗೆಂದು ಕಡತ ಮೇರಮಜಲು ಗ್ರಾಮಕರಣಿಕರ ಕಚೇರಿಗೆ ಬಂದಿತ್ತು. ಅಲ್ಲಿ ಗ್ರಾಮಕರಣಿಕ ಒಂದು ವರ್ಷ ಕಡತ ಇಟ್ಟುಕೊಂಡು ಬಳಿಕ ಅನುಮೋದನೆಗೆ ಉಪತಹಸೀಲ್ದಾರ್‌ಗೆ ಕಳುಹಿಸಿದ್ದರು. ಆದರೆ ಅವರು ಸಹಿ ಹಾಕಿರಲಿಲ್ಲ. ದೂರುದಾರರು ಹಲವು ಬಾರಿ ಉಪತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಕಡತ ಕಳುಹಿಸಲು ವಿನಂತಿಸುತ್ತಿದ್ದರು. ಕೊನೆಗೆ ಅವರು ಸಹಿ ಹಾಕುವುದಕ್ಕೆ ಲಂಚದ ಬೇಡಿಕೆ ಇಟ್ಟಿದ್ದು, ಗುರುವಾರ 1 ಸಾವಿರ ರೂ. ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

    ದ.ಕ ಜಿಲ್ಲಾ ಎಸಿಬಿ ಎಸ್‌ಪಿ ಎನ್.ಸಿ.ಬೋಪಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಗುರುರಾಜ್ ಹಾಗೂ ಶ್ಯಾಮ್‌ಸುಂದರ್ ಎಚ್.ಎಂ. ಕಾರ್ಯಾಚರಣೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts