ಲಿಂಗಸುಗೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶ ದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣಾ ವೇದಿಕೆ ಮತ್ತು ಎಬಿವಿಪಿ ಸಂಘಟನೆಗಳ ನೇತೃತ್ವದಲ್ಲಿ ನಾನಾ ಕಾಲೇಜು ವಿದ್ಯಾರ್ಥಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸಿಪಿಐ ಯಶವಂತ ಬಿಸನಳ್ಳಿಗೆ ಮನವಿ ಸಲ್ಲಿಸಿದರು.
ಬೆಂಗಳೂರಲ್ಲಿ ನಡೆದ ಘಟನೆ ಕೇವಲ ಅಮೂಲ್ಯ ಮತ್ತು ಆರ್ದ್ರಾ ಎಂಬ ಯುವತಿಯರಿಗೆ ಸೀಮಿತವಾಗಿರದೆ ಇದರ ಹಿಂದೆ ದೇಶದ್ರೋಹಿ ಶಕ್ತಿಗಳ ಪಿತೂರಿ ಅಡಗಿರುವುದು ಸ್ಪಷ್ಟ. ಸಿಎಎ ಪ್ರಕರಣ ಆಧಾರವಾಗಿಟ್ಟುಕೊಂಡು ದೇಶದ ಮುಸಲ್ಮಾನರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಮತ್ತು ಅದೇ ಹೆಸರಿನಲ್ಲಿ ದೇಶದ್ರೋಹಿ ಶಕ್ತಿಗಳೆಲ್ಲ ಸಂಘಟಿತವಾಗಿ ಭಾರತದ ವಿಭಜನೆಗೆ ನಡೆಸುತ್ತಿರುವ ವಿದ್ರೋಹದ ಚಟುವಟಿಕೆ ಗೋಚರಿಸುತ್ತಿದೆ ಎಂದು ಆರೋಪಿಸಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಹರೀಶ ಬೆಳಗಲ್, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹನುಮಂತ ಅಂಬಿಗೇರ, ವೀರನಗೌಡ ಲೆಕ್ಕಿಹಾಳ, ಚನ್ನಬಸವ ಹಿರೇಮಠ, ಅನಂತ ದಾಸ್, ಶಶಿಕಾಂತ ಗಸ್ತಿ, ಅಮರೇಶ, ರಾಮು, ಅಂಬು, ಅಮರೇಶ ಹಡಪದ, ಮುತ್ತಣ್ಣ, ಶರಣಬಸವ, ಮಹಾಂತೇಶ, ದೇವಮ್ಮ, ಅಂಬಿಕಾ, ಬಸಲಿಂಗಮ್ಮ, ಚಂದ್ರಮತಿ, ಅನಿತಾ ಇತರರು ಇದ್ದರು.