More

    VIDEO| ಅರವಿಂದ್​ ಕೇಜ್ರಿವಾಲ ಭಯೋತ್ಪಾದಕರಾದರೆ ಬಿಜೆಪಿ ಅವರನ್ನು ಬಂಧಿಸಲಿ; ಆಪ್​ ಸಂಸದ ಸಂಜಯ ಸಿಂಗ್​

    ನವದೆಹಲಿ: ಅರವಿಂದ್​ ಕೇಜ್ರಿವಾಲ ಅವರು ಭಯೋತ್ಪಾದಕರಾಗಿದ್ದರೆ ಅವರನ್ನು ಬಂಧಿಸಲಿ, ಇದು ನಾನು ಬಿಜೆಪಿಗೆ ಮಾಡುತ್ತಿರುವ ಚಾಲೆಂಜ್​ ಎಂದು ಆಪ್​ ಸಂಸದ ಸಂಜಯ್​ ಸಿಂಗ್​ ಸವಾಲೊಡ್ಡಿದ್ದಾರೆ.

    ಈ ಮೊದಲು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಮಾತನಾಡಿ, ಅರವಿಂದ ಕೇಜ್ರಿವಾಲ​ ಅವರು ಅಮಾಯಕರಂತೆ ಮುಖ ಮಾಡಿಕೊಂಡಿರುತ್ತಾರೆ. ನಾನು ಭಯೋತ್ಪಾದಕನಾ ಎಂದು ಕೇಳುತ್ತಾರೆ. ಆದರೆ ಅವರು ಭಯೋತ್ಪಾದಕರೇ. ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದರು.

    ಕೇಜ್ರಿವಾಲ್​ ಅವರು ತಮ್ಮನ್ನು ತಾವು ಅರಾಜಕವಾದಿ ಎಂದು ಕರೆದುಕೊಳ್ಳುತ್ತಾರೆ. ಹಾಗಾದರೆ ಅರಾಜಕವಾದಿಯಾದರೆ ಭಯೋತ್ಪಾದಕರಿಗೂ ನಿಮಗೂ ವ್ಯತ್ಯಾಸವೇನು? ನೀವೂ ಭಯೋತ್ಪಾದಕರೇ ಎಂದು ಜಾವಡೇಕರ್​ ಜರಿದಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಸಂಜಯ್​ ಸಿಂಗ್​, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ಇರುವ, ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ಸಚಿವರು ಇಂತಹ ಭಾಷೆ ಬಳಸುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts